Advertisement

ಪ್ರೊಟೆಸ್ಟೆಂಟ್‌ ಕ್ರಿಶ್ಚಿಯನ್‌ ಸಹಕಾರಿಸಂಘದಸುರತ್ಕಲ್‌ ಶಾಖೆಉದ್ಘಾಟನೆ

12:34 PM May 19, 2018 | |

ಸುರತ್ಕಲ್‌: ಪ್ರೊಟೆಸ್ಟೆಂಟ್‌ ಕ್ರಿಶ್ಚಿಯನ್‌ ಸಹಕಾರಿ ಸಂಘ ನಿಯಮಿತ ಇದರ ಸುರತ್ಕಲ್‌ ಶಾಖೆಯ ಉದ್ಘಾಟನೆ ಶುಕ್ರವಾರ ಜರಗಿತು.

Advertisement

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್‌. ವಸಂತ್‌ ಬೆರ್ನಾಡ್‌ ಉದ್ಘಾಟಿಸಿ ಸಹಕಾರಿ ಸಂಘವು ಕಳೆದ 100 ವರ್ಷಗಳಲ್ಲಿ ಸಮುದಾಯದ ಜನರ ಸೇವೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಇದೀಗ ಸರ್ವರ ಸೇವೆಗೆ ಪ್ರೊಟೆಸ್ಟೆಂಟ್‌ ಕ್ರಿಶ್ಚಿಯನ್‌ ಸಹಕಾರಿ ಸಂಘ ಮುಂದಾಗಿದ್ದು ಒಳ್ಳೆಯ ಬೆಳವಣಿಗೆ ಎಂದರು.

ಕೃಷ್ಣಾಪುರ ಸಿಎಸ್‌ಐ ಕಾರುಣ್ಯ ಚರ್ಚ್‌ನ ಸಭಾ ಪಾಲಕ ವಂ| ಐಸನ್‌ ಎಸ್‌. ಪಾಲನ್ನ, ಮೂಲ್ಕಿ ಸಿಎಸ್‌ಐ ಯೂನಿಟಿ ಚರ್ಚ್‌ನ ಸಭಾಪಾಲಕ ವಂ| ಎಡ್ವರ್ಡ್ ಕರ್ಕಡ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ನಿಖರು ಠೇವಣಿಯ ಪತ್ರವನ್ನು ಠೇವಣಿದಾರರಿಗೆ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಇಮ್ಯಾನುವೆಲ್‌ ಯ. ಪ್ರಮೋದನ್‌ ಅಧ್ಯಕ್ಷತೆ ವಹಿಸಿದ್ದರು. ಪಣಂಬೂರು ಸಿಎಸ್‌ಐ ಕ್ರಿಸ್ತಕಾಂತಿ ಚರ್ಚ್ ನ ಸಭಾ ಪಾಲಕ ವಂ| ಸಂತೋಷ್‌ ಕುಮಾರ್‌, ಕಾಸರಗೋಡು ಸಿಎಸ್‌ಐ ಬೇತಲ್‌ ಚರ್ಚ್‌ನ ಸಭಾ ಪಾಲಕ ವಂ| ಎ. ವಿನಯಲಾಲ್‌ ಬಂಗೇರ, ಸಿಎಸ್‌ಐ ಅಮ್ಮನ್‌ ಮೆಮೋರಿಯಲ್‌ ಚರ್ಚ್‌ ಹಳೆಯಂಗಡಿ ಇದರ ಸಭಾ ಪಾಲಕ ವಂ| ಸೆಭಾಸ್ಟಿಯನ್‌ ಜತ್ತನ್ನ, ವಂ| ವಿನ್ಫ್ರೆಡ್  ಅಮ್ಮನ್ನ, ವಂ| ಸಿಡ್ನಿ ಎಸ್‌. ಸಾಲಿನ್ಸ್‌, ಉಪಾಧ್ಯಕ್ಷ ಡಬ್ಲ್ಯು ಎನ್‌. ಗೋಜರ್‌, ಮುಖ್ಯ ಕಾರ್ಯ ನಿರ್ವಹಣಾಕಾರಿ ಹ್ಯಾಂಡ್ಲಿ ಎಸ್‌. ಸೋನ್ಸ್‌, ನಿರ್ದೇಶಕರಾದ ಪಿ.ಎಸ್‌. ಶಾಂತಕುಮಾರ್‌, ಸೆಬಾಸ್ಟಿಯನ್‌ ಜೆ. ಬ್ರಿಟ್ಟೋ, ಆಸ್ಟಿನ್‌ ಬಿ. ಸೋನ್ಸ್‌, ಹೌರಿಸ್‌ ಜಿ. ಸೋನ್ಸ್‌, ಸುಧಾನ ಸಾಲಿನ್ಸ್‌, ಶರ್ಮಿಳ ಜೆ. ಶೆಟ್ಟಿಯಾನ್‌, ಕಟ್ಟಡ ಮಾಲಕ ಜೀವನ್‌ನಾಥ್‌ ಉಪಸ್ಥಿತರಿದ್ದರು. ಅಧ್ಯಕ್ಷ ಇಮ್ಯಾನುವೆಲ್‌ ಪ್ರಮೋದನ್‌ ಸ್ವಾಗತಿಸಿದರು. ಸುನೀಲ್‌ ಎ. ಸೋನ್ಸ್‌ ವಂದಿಸಿದರು. ಬೆನೆಟ್‌ ಅಮ್ಮನ್ನ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next