Advertisement

ಕೆಎಸ್‌ಬಿಸಿಎಲ್‌ ಡಿಪೋ ಮುಂಭಾಗ ಧರಣಿ; ಮನವಿ

12:40 PM Apr 08, 2022 | Team Udayavani |

ಮಹಾನಗರ: ಕರ್ನಾಟಕ ರಾಜ್ಯ ಪಾನೀಯ ನಿಗಮ ಮಂಡಳಿಯು ರಾಜ್ಯದ ಸನ್ನದುದಾರರಿಗೆ ಮದ್ಯ ಖರೀದಿ ಬಗ್ಗೆ ಯಾವುದೇ ಪೂರ್ವ ತಯಾರಿ ನಿರ್ದೇಶನಗಳನ್ನು ಸೂಚಿಸದೆ ಏಕಾಏಕಿ ಅಸಮರ್ಪಕವಾಗಿ ವೆಬ್‌ ಇಂಡೆಂಟ್‌ ಪದ್ಧತಿಯನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ತೊಂದರೆ ಉಂಟಾಗುತ್ತಿದ್ದು, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ದ.ಕ. ಜಿಲ್ಲಾ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಶನ್‌ ಮಂಗಳೂರು ಇದರ ಮುಂದಾಳತ್ವದಲ್ಲಿ ಮಂಗಳೂರು, ಬೈಕಂಪಾಡಿ, ಪುತ್ತೂರು ಕೆಎಸ್‌ಬಿಸಿಎಲ್‌ ಡಿಪೋ ಮುಂಭಾಗ ಧರಣಿ ಕೈಗೊಂಡು ಕೆಎಸ್‌ಬಿಸಿಎಲ್‌ ನಿರ್ದೇಶಕ ಪಿ.ಸಿ. ಜಾಪರ್‌ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

Advertisement

ತಂತ್ರಾಶದಲ್ಲಿನ ಲೋಪ ದೋಷಗಳಿಂದ ಮದ್ಯ ಖರೀದಿಸಲು ಸಾಧ್ಯವಾಗದೇ ಹಿಂದಿನ ಪದ್ಧತಿ ಯಲ್ಲಿಯೂ ಮದ್ಯ ಖರೀದಿಸಲು ಸಾಧ್ಯವಾಗದೇ ಮದ್ಯ ವ್ಯಾಪಾರಸ್ಥರ ದಾಸ್ತಾನು ಖಾಲಿಯಾಗಿ ಗಂಭೀರ ಸಮಸ್ಯೆ ಬಗೆಹರಿಸುವಂತಾಗಿ ಎಂದು ಮನವಿ ಮಾಡಲಾಯಿತು.

ಮಂಗಳೂರಿನ ಮರೋಳಿ ಡಿಪೋದಲ್ಲಿ ರಾಜ್ಯ ಫೆಡರೇಶನ್‌ ಕಾರ್ಯಕಾರಿ ಸಮಿತಿ ಸದಸ್ಯ, ದ.ಕ. ಜಿಲ್ಲಾ ಪದಾಧಿಕಾರಿಗಳಾದ ಚಂದ್ರನಾಥ್‌ ಅತ್ತಾವರ್‌, ಓಂಪ್ರಸಾದ್‌ ಬಾರ್ದಿಲ, ಮಂಗಳೂರು ತಾಲೂಕು ಪದಾಧಿಕಾರಿಗಳಾದ ದಿನೇಶ್‌ ರಾಜ್‌ ಕೆ. ಅಂಚನ್‌, ಎಚ್‌. ನಾಗೇಶ್‌ ಶೆಟ್ಟಿ, ಸದಸ್ಯರಾದ ಜೇಕ್‌ ಎಲ್‌. ಪಿಂಟೋ, ರಮಾನಾಥ್‌ ಬ್ಲೂ ಪಾರ್ಕ್‌, ಶರತ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next