Advertisement

ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ಸಿಮೆಂಟ್ ಕಂಪನಿ ಮುಂದೆ ಪ್ರತಿಭಟನೆ

01:24 PM Dec 20, 2023 | Team Udayavani |

ಚಿಂಚೋಳಿ: ತಾಲೂಕಿನ ಛತ್ರಸಾಲ ಗ್ರಾಮದಲ್ಲಿ‌ಸ್ಥಾಪಿತವಾಗಿರುವ ಕಲಬುರಗಿ ಸಿಮೆಂಟ್ ಕಂಪನಿಯ ಮುಂದೆ ಸೇಡಮ ಮಾಜಿ‌‌ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನೇತೃತ್ವದಲ್ಲಿ ವಿವಿಧ ಬೇಡಿಕೆಯ ಈಡೇರಿಕೆಗೆ ಅಗ್ರಹಿಸಿ ಪ್ರತಿಭಟನೆ ನಡೆಸಿದರು.

Advertisement

ಜಮೀನು ಕಳೆದುಕೊಂಡ ರೈತರಿಗೆ ಕಂಪನಿಯ ವತಿಯಿಂದ ಉದ್ಯೋಗ ಕೊಟ್ಟಿಲ್ಲ, ಮಕ್ಕಳಿಗೆ ಶಿಕ್ಷಣ ಕೊಡುವುದರಲ್ಲಿ ರಾಜಕೀಯ ಪಕ್ಷಪಾತ ಮಾಡಲಾಗುತ್ತಿದೆ. ‌ಜನರಿಗೆ  ಉಚಿತವಾಗಿ ಆರೋಗ್ಯ ತಪಾಸಣಾ ನಡೆಯುತ್ತಿಲ್ಲ.‌‌ಕಂಪನಿಯ ವಿರುದ್ಧವಾಗಿ ‌ಹಕ್ಕುಗಳು‌ಕೇಳಿದರೆ ಅಂತಹವರಿಗೆ ಕಂಪನಿಯು ಕೆಲಸದಿಂದ ತೆಗೆದುಹಾಕಲಾಯಿತು ಎಂದು ಪ್ರತಿಭಟನಾಕಾರರು ಹೇಳಿದರು.

ಕಲಬುರಗಿ ಸಿಮೆಂಟ್ ಕಂಪನಿಯ ‌ಕಳೆದ ಅನೇಕ ವರ್ಷದಲ್ಲಿ ‌ಜನರಿಗೆ‌ ಮೂಲ ಸೌಕರ್ಯಗಳನ್ನು ‌ಕೊಟ್ಟಿಲ್ಲ. ಕಂಪನಿಯು ಸಮಸ್ಯೆಗಳನ್ನು ಪರಿಗಣಿಸಬೇಕು ‌ಎಂದು ಕಂಪನಿಯ ವಿರುದ್ಧ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next