Advertisement

ಕೋವಿಡ್‌ ಆಸ್ಪತ್ರೆಯಲ್ಲಿ ಆರೈಕೆ ಸಿಗದ್ದಕ್ಕೆ ಸಿಡಿದೆದ್ದ ಸೋಂಕಿತರು

02:31 PM May 14, 2021 | Team Udayavani |

ಚಾಮರಾಜನಗರ: ನಗರದ ಎಡಬೆಟ್ಟದ ಬಳಿಯಿರುವ ಸರ್ಕಾರಿ ಮೆಡಿಕಲ್‌ ಕಾಲೇಜಿನ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲವೆಂದು ಸೋಂಕಿತರು ಪ್ರತಿಭಟಿಸಿದರು.

Advertisement

ಈ ಕೋವಿಡ್‌ ಕೇರ್‌ ಸೆಂಟರ್‌ ಆರಂಭವಾಗಿ ಒಂದು ವಾರವಾಗಿದ್ದು, ರೋಗಿಗಳನ್ನು ನಿರ್ಲಕ್ಷಿಸ ಲಾಗಿದೆ ಎಂದು ಆರೋಪಿಸಿ ಸೋಂಕಿತರು ಗುರುವಾರ ಕೇರ್‌ ಸೆಂಟರ್‌ನ ಹಾಲ್‌ನಿಂದ ಹೊರಗೆ ಬಂದು ಧರಣಿ ನಡೆಸಿದರು. ಕಳೆದ 8 ದಿನಗಳಿಂದ ಈ ಕೋವಿಡ್‌ ಕೇರ್‌ ಕೇಂದ್ರದಲ್ಲಿದ್ದೇನೆ. ಪ್ರತಿದಿನ ರೋಗಿಗಳಿಗೆ ಆಹಾರದ ಕೊರತೆಯಾಗುತ್ತಿದೆ. ಗುರುವಾರ ಬೆಳಗ್ಗೆ 20 ಜನರಿಗೆ ತಿಂಡಿ ಸಿಗಲಿಲ್ಲ. ಬುಧವಾರ ರಾತ್ರಿ ಸಹ ಊಟದ ಕೊರತೆಯಾಯಿತು. ಮೊಟ್ಟೆಯನ್ನು 50 ಜನರಿಗೆ ಮಾತ್ರ ನೀಡಲಾಗುತ್ತದೆ. ಆಸ್ಪತ್ರೆ ಊರಿನಿಂದ ದೂರ ದಲ್ಲಿದ್ದು, ಮನೆಯವರಿಂದಲೂ ತಿಂಡಿ ಊಟ ತರಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಬಂದಿದ್ದೇವೆ ಎಂದು ರೋಗಿಯೊಬ್ಬರು ಅಳಲು ತೋಡಿಕೊಂಡರು.

ನಮ್ಮನ್ನು ಯಾವಾಗಲೋ ಒಮ್ಮೆ ವೈದ್ಯರು, ನರ್ಸ್‌ ನೋಡುತ್ತಾರೆ. ರಾತ್ರಿ 12 ಗಂಟೆ ಮೇಲೆ ಯಾರೂ ಇರುವುದಿಲ್ಲ. ಆ ಸಮಯದಲ್ಲಿ ಏನಾದರೂ ತೊಂದರೆಯಾದರೆ ಕೇಳಲು ಸಹ ಯಾರೂ ಇರುವುದಿಲ್ಲ. ಊಟ ತಿಂಡಿ ಮಾತಿರಲಿ, ರೋಗಿಗಳಿಗೆ ಸರಿಯಾಗಿ ಮಾತ್ರೆಗಳನ್ನೂ ನೀಡುತ್ತಿಲ್ಲ. ಕೇಳಿದರೆ ಸ್ಟಾಕಿಲ್ಲ. ನಾಳೆ ಬರುತ್ತದೆ, ನಾಡಿದ್ದು ಬರುತ್ತದೆ ಎನ್ನುತ್ತಾರೆ. ಹೀಗಾದರೆ ನಮ್ಮ ಕಾಯಿಲೆ ಗುಣವಾಗುವುದು ಹೇಗೆ ಎಂದು ಸೋಂಕಿತರು ಪ್ರಶ್ನಿಸಿದರು. ಪ್ರ

ತಿಭಟನೆ ವಿಷಯ ತಿಳಿದು ಮೆಡಿಕಲ್‌ ಕಾಲೇಜು ಡೀನ್‌ ಡಾ. ಸಂಜೀವ್‌ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿದರು. ಆಗ ರೋಗಿಗಳು ಅವರನ್ನು ತರಾಟೆಗೆ ತೆಗೆದುಕೊಂಡರು. ಮಾಧ್ಯಮದವರು ಕೋವಿಡ್‌ ಕೇರ್‌ ಸೆಂಟರ್‌ಗೆ ತೆರಳುತ್ತಿದ ªಂತೆಯೇ ಡೀನ್‌ ಅವರು ಕಾರು ಹತ್ತಿ ಹೊರಟು ಹೋದರು.

Advertisement

Udayavani is now on Telegram. Click here to join our channel and stay updated with the latest news.

Next