Advertisement

ಹಿಂದೂ ಯುವಕರ ಹತ್ಯೆಗೆ ವಿರೋಧ

12:51 PM Jun 01, 2022 | Team Udayavani |

ಕಲಬುರಗಿ: ವಾಡಿಯಲ್ಲಿ ಹತ್ಯೆಯಾಗಿರುವ ದಲಿತ ಯುವಕನ ಕುಟುಂಬಕ್ಕೆ ಆರ್ಥಿಕ ಭದ್ರತೆ ಮತ್ತು ಸರಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

Advertisement

ವಾಡಿಯಲ್ಲಿ ಮುಸ್ಲಿಮ ಯುವತಿಯನ್ನು ಪ್ರೀತಿ ಮಾಡಿದ ಕಾರಣಕ್ಕೆ ವಿಜಯ ಕಾಂಬಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಿಜಯನನ್ನು ಕಳೆದುಕೊಂಡು ಕುಟುಂಬ ಬಡವಾಗಿದೆ. ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮಹೇಶ ಎಸ್‌.ಗೊಬ್ಬೂರು, ರಾಕೇಶ ಜಮಾದಾರ, ಸಂತೋಷ ಹಿರೇಮಠ, ಮಹೇಶ್‌, ಅರುಣ ಸುಲ್ತಾನಪುರ, ಶೇಖರ, ಅಂಬಾರಾಯ ಕುಂಬಾರ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next