Advertisement

ವಿಶ್ವ ಹಿಂದೂ ಪರಿಷತ್‌ನಿಂದ ಪ್ರತಿಭಟನೆ

08:12 PM Oct 29, 2021 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಆವರಣದಲ್ಲಿದ್ದ ಶಿವಾಜಿ ಮಹಾರಾಜರ ಮೂರ್ತಿ ಕಳಪೆ ಕಾಮಗಾರಿಯಿಂದ ಮುರಿದು ಬಿದ್ದಿದ್ದು, ಮರು ನಿರ್ಮಾಣ ಕಾಮಗಾರಿ ವಿಳಂಬ ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಸಂಘಟನೆ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಶಿವಾಜಿ ಮಹಾರಾಜರ ಮೂರ್ತಿ, ಕಳಪೆ ಕಾಮಗಾರಿಯಿಂದ ಮುರಿದು ಬಿದ್ದಿದೆ. ಕೂಡಲೇ ಹೊಸ ಮೂರ್ತಿ ಮಾಡಿಸಿ ಮರು ಸ್ಥಾಪಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಪಾಲಿಕೆ ಅಧಿಕಾರಿಗಳು ನಿರ್ಲಕ್ಷé ಮಾಡುತ್ತಿದ್ದಾರೆ. ಕಳಪೆ ಕಾಮಾಗಾರಿ ನಿರ್ವಹಿಸಿದ ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೊಸ ಮೂರ್ತಿ ಸ್ಥಾಪನೆ ಕುರಿತು ಪಾಲಿಕೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಮೂರ್ತಿ ಯಾವಾಗ ಸ್ಥಾಪಿಸಲಾಗುವುದು ಎನ್ನುವ ಕುರಿತು ಸ್ಪಷ್ಟಪಡಿಸಬೇಕು. ಶಿವಾಜಿ ಮಹಾರಾಜರ ಕಳಪೆ ಗುಣಮಟ್ಟದ ಮೂರ್ತಿಯನ್ನು ಪರಿಶೀಲಿಸದೆ ಸ್ಥಾಪನೆ ಮಾಡಿದ ಅಧಿಕಾರಿಗಳ ವಿರುದ್ಧವೂ ಕ್ರಮವಾಗಬೇಕು. ಕೂಡಲೇ ಮೂರ್ತಿ ಸ್ಥಾಪನೆ ಮಾಡಿದ ಸಮಿತಿ ವಿರುದ್ಧ 15 ದಿನಗಳಲ್ಲಿ ದೂರು ದಾಖಲಿಸಬೇಕು. ಇಲ್ಲವಾದಲ್ಲಿ ಮುಂದೆ ಹಿಂದೂ ಸಂಘಟನೆ ವತಿಯಿಂದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರಾಘವೆಂದ್ರ ಕಠಾರೆ, ಸಂಘಟನೆ ಮುಖಂಡರಾದ ಗಣೇಶ ಕದಂ, ಸಿದ್ದು ರಾಯನಾಳ, ವಿಜಯ ಮಾಮರಡಿ, ರಾಜ ಪವಾರ, ಮಹಿಳಾ ಘಟಕದ ಪ್ರಮುಖರಾದ ದೀಪಾ ನಂದಾಲ, ನೀತು ಪವಾರ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next