Advertisement

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಆಕ್ರೋಶ

03:37 PM Aug 01, 2023 | Team Udayavani |

ಚಾಮರಾಜನಗರ: ಮಣಿಪುರದಲ್ಲಿ ಆದಿವಾಸಿ ಕುಕಿ ಸಮುದಾಯದ ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ನಡೆಸಿರುವ ದೌರ್ಜನ್ಯ ಖಂಡಿಸಿ ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿ ಭಟನೆ ನಡೆಸಲಾಯಿತು.

Advertisement

ರಾಷ್ಟ್ರಪತಿಗೆ ಮನವಿ: ಗರದ ಚಾಮ ರಾಜೇಶ್ವರ ದೇವಾಲ ಯದಿಂದ ಮೆರವಣಿಗೆ ಹೊರಟು, ಭುವನೇ ಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿ, ಜನಾಂಗೀಯ ದ್ವೇಷ ನಿಲ್ಲಬೇಕು, ಶಾಂತಿ ಸೌಹಾರ್ದತೆ ಮರು ಸ್ಥಾಪನೆ ಗೊಳ್ಳಬೇಕು ಎಂದು ಆಶಿಸಿದರು.

ನಂತರ ಜಿಲ್ಲಾಧಿಕಾರಿ ಆವರಣಕ್ಕೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿ ಕಾರಿ ಕಚೇರಿ ಮೂಲಕ ರಾಷ್ಟ್ರಪತಿಯ ವರಿಗೆ ಮನವಿ ಸಲ್ಲಿಸಿದರು.

ನಿರ್ಗತಿಕರು: ಮಣಿಪುರ ಘಟನೆ ಅತ್ಯಂತ ಅಮಾನ ವೀಯವಾದದ್ದು. ಹಿಂಸಾಚಾರ ದ್ವೇಷದಿಂದ ಕೂಡಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ, ಬೆತ್ತಲೆ ಮೆರವಣಿಗೆಯಂಥ ಘಟನೆ ಗಳು ಇಡೀ ಮಾನವ ಕುಲ ತಲೆ ತಗ್ಗಿಸುವಂಥದಾಗಿದೆ. ಗಲಭೆಯಲ್ಲಿ 200ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವಿರಾರು ಮನೆಗಳಿಗೆ ಹಾನಿ ಮಾಡಲಾಗಿದೆ. ಅಲ್ಲಿನ ಸಾವಿ ರಾರು ಕುಟುಂಬಗಳವರು ನಿರ್ಗತಿಕ ರಾಗಿದ್ದಾರೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.

ಮಣಿಪುರದ ಕುಕಿ ಸಮುದಾಯದ ಗ್ರಾಮಕ್ಕೆ ಮೈತೇಯಿ ಸಮುದಾಯ ದವರು ನುಗ್ಗಿ, ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ದ್ದಾರೆ. ಅಲ್ಲದೇ ಆ ಮಹಿಳೆಯರ ಸಹೋದರ, ತಂದೆಯನ್ನು ಹೀನಾಯವಾಗಿ ಕೊಂದಿದ್ದಾರೆ. ಈ ಘಟನೆ ಗಳನ್ನು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇಂಥ ಹೇಯ ಕೃತ್ಯ ಎಸಗಿದವರ ವಿರುದ್ಧ ಕಠಿಣ ಶಿಕ್ಷೆ ಯಾಗಬೇಕು. ಆ ಮೂ ಲಕ ಆ ಮಹಿಳೆಯರಿಗೆ ನ್ಯಾಯ ಒದಗಿಸ ಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

Advertisement

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಮಾದಮ್ಮ, ಕಾರ್ಯದರ್ಶಿ ಡಾ.ಸಿ.ಮಾದೇ ಗೌಡ, ರಾಜ್ಯ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಜಡೇಸ್ವಾಮಿ, ಕಾರ್ಯದರ್ಶಿ ವಿ. ಮುತ್ತಯ್ಯ, ಜಿಪಂ ಮಾಜಿ ಸದಸ್ಯೆ ಕೇತಮ್ಮ, ದಾಸೇ ಗೌಡ, ದೊಡ್ಡಸಿದ್ದ, ಕೋಣೋರೇ ಗೌಡ, ಮಾಧು, ರಂಗೇಗೌಡ, ಬಸ ವರಾಜು, ಪ್ರಭು, ಕುನ್ನ ಹೊಳಯ್ಯ, ರಾಜೇಂದ್ರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next