Advertisement

ನ್ಯಾಯಾಧೀಶರ ವಿರುದ್ಧ ಪ್ರತಿಭಟನೆ

01:18 PM Feb 07, 2022 | Team Udayavani |

ಶಹಾಬಾದ: ಸಂವಿಧಾನ ಶಿಲ್ಪಿ ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ಸತ್ರ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ರವಿವಾರ ಮಾದಿಗ ದಂಡೋರ ಸಮಿತಿ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಮಾದಿಗ ದಂಡೋರ ಯುವ ಸೇನೆ ತಾಲೂಕು ಅಧ್ಯಕ್ಷ ವಿಕ್ರಮ ಪ್ರಸಾದ ಮಾತನಾಡಿ, ರಾಜ್ಯಪಾಲರು ಹಾಗೂ ಉತ್ಛ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ಗುರುರಾಜ ಭಂಡಾರಿ, ಲೋಹಿತ ಕಟ್ಟಿ, ಉಮೇಶ ಪೋಚೆಟ್ಟಿ, ಹರೀಶ ಕರಣಿಕ, ಶಿವು ತಳವಾರ, ಪ್ರಕಾಶ ಮಾಳಗಿ, ನಾಗರಾಜ ಮುದ್ನಾಳ, ನವೀನ ಸಿಪ್ಪಿ, ಕಲ್ಯಾಣಿ ಕಡ್ಡಿಹಳ್ಳಿ, ಲಕ್ಷ್ಮೀಕಾಂತ, ಬಸವರಾಜ, ಯಲ್ಲಾಲಿಂಗ ಗೋಳಾ, ಶಿವು ರಾಮಗಡ, ವಿಶಾಲ ತರನಳ್ಳಿ, ಶಿವನಾಗ ದುಪ್ಪಲ್ಲಿ, ರವಿ ತಾತಳಗೇರಿ, ಪ್ರವೀಣ, ಮೈನಾಳಕರ್‌ ಹಾಗೂ ದಲಿತ ಪರ ಸಂಘಟನೆ ಯುವ ಮುಖಂಡರು ಪಾಲ್ಗೊಂಡಿದರು.

ನಂತರ ಗ್ರೇಡ್‌-2 ತಹಶೀಲ್ದಾರ್‌ ಗುರುರಾಜ ಸಂಗಾವಿ ಮೂಲಕ ಉಚ್ಚ ನ್ಯಾಯಾಲಯ ನ್ಯಾಯಾಧೀಶರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next