Advertisement

ಜಿಲೇಬಿ ತಿನ್ನುತ್ತಿದ್ದವರು ಕಾಣೆಯಾಗಿದ್ದಾರೆ: ಗಂಭೀರ್ ವಿರುದ್ಧ ಯಾಕೆ ಈ ಪ್ರತಿಭಟನೆ?

09:44 AM Nov 18, 2019 | keerthan |

ಹೊಸದಿಲ್ಲಿ: ಮಾಜಿ ಕ್ರಿಕೆಟರ್ ಮತ್ತು ಪೂರ್ವ ದೆಹಲಿಯ ಸಂಸದ ಗೌತಮ್ ಗಂಭಿರ್ ಅವರು ಕಾಣೆಯಾಗಿದ್ದಾರಂತೆ! ಗಂಭೀರ್ ಕಾಣೆಯಾಗಿದ್ದೆರೆಂಬ ಗೋಡೆ ಬರಹಗಳು ದಿಲ್ಲಿಯಲ್ಲಿ ರಾರಾಜಿಸುತ್ತಿದೆ.

Advertisement

ಕಾಣೆಯಾಗಿದ್ದರೆ. ಈ ವ್ಯಕ್ತಿಯನ್ನು ನೀವು ಎಂದಾದರೂ ನೋಡಿದ್ದೀರಾ? ಇಂಧೋರ್ ನಲ್ಲಿ ಜಿಲೇಬಿ ತಿನ್ನುತ್ತಿದ್ದಾಗ ಇವರನ್ನು ಕೊನೆಯದಾಗಿ ನೋಡಿದ್ದು ಎಂಬ ಒಕ್ಕಣೆಯುಳ್ಳ ಪೋಸ್ಟರ್ ಗಳನ್ನು ದಿಲ್ಲಿಯ ಮರಗಳಿಗೆ ಅಂಟಿಸಲಾಗಿದೆ.

ಶುಕ್ರವಾರ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸಭೆಗೆ ಗೈರು ಹಾಜರಾಗಿದ್ದ ಗೌತಮ್ ಗಂಭೀರ್ ಇಂಧೋರ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ವೀಕ್ಷಕ ವಿವರಣೆಯಲ್ಲಿ ಭಾಗವಹಿಸಿದ್ದರು. ಅದರಲ್ಲೂ ಗಂಭೀರ್ ಅಲ್ಲಿ ಜಿಲೇಬಿ ತಿನ್ನುವ ಫೋಟೋ ಭಾರಿ ವೈರಲ್ ಆಗಿತ್ತು.

ಇದೇ ಕಾರಣಕ್ಕಾಗಿ ಗಂಭೀರ್ ಭಾರಿ ಟೀಕೆಗಳನ್ನು ಎದುರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next