Advertisement

ತಹಶೀಲ್ದಾರ್‌ ಹತ್ಯೆ ಖಂಡಿಸಿ ಪ್ರತಿಭಟನೆ

05:11 AM Jul 11, 2020 | Lakshmi GovindaRaj |

ಹುಣಸೂರು: ಬಂಗಾರಪೇಟೆ ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಸಂಘ, ಗ್ರಾಮಲೆಕ್ಕಿಗರ ಸಂಘ, ಭೂ ಮಾಪನಾ ಇಲಾಖೆ ನೌಕರರ ಸಂಘಗಳು ಜಂಟಿಯಾಗಿ ಪ್ರತಿಭಟಿಸಿ, ತಹಶೀಲ್ದಾರ್‌ ಬಸವರಾಜ್‌ರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕು ಕಚೇರಿ ಬಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಪ್ಪು ಪಟ್ಟಿ ಧರಿಸಿ ಜಮಾಯಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಲೋಕೇಶ್‌,  ಪೊಲೀಸರ ಸಮ್ಮುಖದಲ್ಲಿಯೇ ತಹಶೀ ಲ್ದಾರರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಅಮಾನವೀಯ ಘಟನೆ.

ಸರಕಾರದ ಬಹುಪಾಲು ಯೋಜನೆಗಳನ್ನು ಕಂದಾಯ ಇಲಾಖೆ ಮುಖಾಂತರವೇ ಅನುಷ್ಠಾನಗೊಳಿಸುತ್ತಿದೆ.  ಸರ್ಕಾರಿ ಅಧಿಕಾರಿ ಮತ್ತು ನೌಕರರ ಮೇಲೆ ಆಗಾಗ್ಗೆ ಹಲ್ಲೆ, ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಎರಡು ನಿಮಿಷ ಮೌನ ಆಚರಿಸುವ ಮೂಲಕ ಮೃತ ತಹಶೀಲ್ದಾರರಿಗೆ ಸಂತಾಪ ಸೂಚಿಸಿದರು.

ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಮೂರ್ತಿಕುಮಾರ್‌, ಭೂ ಮಾಪಕರ ನೌಕರರ ಸಂಘದ ಅಧ್ಯಕ್ಷ ಕುಮಾರ್‌, ಕಂದಾಯ ನೌಕರರ ಸಂಘದ ಉಪಾಧ್ಯಕ್ಷೆ ಪುಷ್ಪ, ಉಪ ತಹಶೀಲ್ದಾರ್‌ ಗುರು ಸಿದ್ದಯ್ಯ, ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಮೂರ್ತಿಕುಮಾರ್‌, ಉಪಾಧ್ಯಕ್ಷ ನಾಗೇಶ್‌, ಕಾರ್ಯದರ್ಶಿ ಶಿವಕುಮಾರ್‌, ಖಜಾಂಚಿ ಗಿರೀಶ್‌, ಪದಾಧಿಕಾರಿಗಳಾದ ಮಹದೇವ್‌, ಶ್ಯಾಮಣ್ಣ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next