Advertisement

ಸಿಎಎ, ಎನ್ ಆರ್ ಸಿ ವಿರೋಧಿಸಿ ಸಿಂಧನೂರಿನಲ್ಲಿ ರಕ್ತದ ಸಹಿ ಸಂಗ್ರಹ

09:53 AM Jan 20, 2020 | keerthan |

ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್ ಆರ್ ಸಿ, ಎನ್ಆರ್ ಪಿ ಖಂಡಿಸಿ ಸಿಂಧನೂರಿನಲ್ಲಿ ರಕ್ತದ ಸಹಿ ಸಂಗ್ರಹ ಚಳವಳಿ ನಡೆಸಲಾಯಿತು.

Advertisement

ಸಿಂಧನೂರಿನ ಆರ್ ಜಿಎಂ ಶಾಲಾ ಮೈದಾನದಲ್ಲಿ ರವಿವಾರ ಸಿಎಎ, ಎನ್ ಆರ್ ಸಿ ಖಂಡಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮುಸ್ಲಿಂ ಸಮಾಜದ ಯುವಕರು ರಕ್ತದಲ್ಲೇ ಸಹಿ ಸಂಗ್ರಹ ಮಾಡಿದರು. ನೊ ಸಿಎಎ, ಎನ್ ಆರ್ ಸಿ, ಎನ್ ಆರ್ ಪಿ ಎಂದು ರಕ್ತದಲ್ಲಿ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ದೇಶಕ್ಕಾಗಿ ರಕ್ತ ಹರಿಸಲು ಸಿದ್ಧ. ರಕ್ತದಿಂದ ಸ್ವಾತಂತ್ರ್ಯ ಬರೆಯುತ್ತೇವೆ ಎಂಬಂಥ ಘೋಷಣೆ ಬರೆಯಲಾಗಿದೆ. ಅದರ ಜತೆಗೆ ರಾಷ್ಟ್ರಪತಿಗೆ ಪತ್ರ ಚಳವಳಿ ಕೂಡ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next