Advertisement

‘ಮಂತ್ರಿಗಳೇ ನಮಗೆ ನೇಮಕಾತಿ ಆದೇಶ ನೀಡಿ’ : ಸಚಿವ ಪಾಟೀಲ್ ಮನೆ ಎದುರು ಧರಣಿ

09:08 PM Feb 08, 2021 | Team Udayavani |

ಬೆಂಗಳೂರು: ನೇಮಕಾತಿ ಆದೇಶ  ನೀಡುವಂತೆ ಒತ್ತಾಯಿಸಿ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್ ನಿವಾಸದ ಎದರು 20 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ :ಕ್ಯಾಸಲ್‌ರಾಕ್‌ ಅರಣ್ಯದಲ್ಲಿ ಸಂಶಯಾಸ್ಪದ ಗನ್‌ ಪತ್ತೆ

2017ರಲ್ಲಿ ಕೆಪಿಎಸ್ ಸಿ ಮೂಲಕ ಪಿಯು ಉಪನ್ಯಾಸಕ ಹಾಗೂ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಅಭ್ಯರ್ಥಿಗಳಿಗೆ ಒಂದೇ ಸಮಯದಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಈ ವೇಳೆ ಆಯ್ಕೆಯಾದ  1200  ಪಿಯು ಉಪನ್ಯಾಸಕರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಆದರೆ, ಅಲ್ಪಸಂಖ್ಯಾತ ಇಲಾಖೆಯಿಂದ 60 ಜನ ಉಪನ್ಯಾಸಕ ಅಭ್ಯರ್ಥಿಗಳ ನೇಮಕಾತಿ ತಡೆ ನೀಡಲಾಗಿದೆ.

ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಧರಣಿ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳು ನೇಮಕಾತಿ ಆದೇಶ ನೀಡುವಂತೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next