Advertisement

ಆರಂಭವಾಯ್ತು ಕೆರೆಗಳ ರಕ್ಷಣೆ ಕಾಯಕ

01:31 PM Oct 31, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ದಶಕಗಳ ಹಿಂದೆಯೇ ಕೆರೆಗಳಿಗಾಗಿ ಜಿಲ್ಲಾಡಳಿತ ಭೂಮಿ ಸ್ವಾಧೀನ ಮಾಡಿಕೊಂಡು ರೈತರಿಗೆ ಪರಿಹಾರ ಕೊಟ್ಟಿದ್ದರೂ ಅವುಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿರಲಿಲ್ಲ. ಈಗ ಕೆರೆಗಳ ರಕ್ಷಣೆಯ ಕಾಯಕ ಆರಂಭವಾಗಿದೆ. ಜಿಲ್ಲೆಯ 22 ಕೆರೆಗಳು ಆರ್‌ಟಿಸಿ ಭಾಗ್ಯ ಕಂಡಿವೆ. ಸರ್ಕಾರದ ಅಧೀಕೃತ ದಾಖಲೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

Advertisement

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿಯೇ 122 ಕೆರೆಗಳಿವೆ. ಈ ಹಿಂದಿನಿಂದಲೂಅವುಗಳ ರಕ್ಷಣೆ ಅಷ್ಟಕ್ಕಷ್ಟೇ ಎನ್ನುವಂತಿತ್ತು. ಇಲಾಖೆ ದಾಖಲೆಗಳಲ್ಲಿಮಾತ್ರ ನಮ್ಮ ವ್ಯಾಪ್ತಿಯಲ್ಲಿ ಇಷ್ಟು ಕೆರಗಳು ಇವೆ ಎನ್ನುವ ಮಾಹಿತಿ ಇಟ್ಟುಕೊಂಡಿತ್ತು. ಆದರೆ ವರ್ಷಕ್ಕೊಮ್ಮೆ ಲೆಕ್ಕಬಾಕಿ ತೋರಿಸುತ್ತಿತ್ತು. ಜಿಲ್ಲಾಡಳಿತವು 1980, 1990ರ ದಶಕದಲ್ಲಿ ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ನಿರ್ಮಾಣದ ನೂರಾರು ರೈತರ ಜಮೀನುಗಳನ್ನು ಸ್ವಾಧಿಧೀನ ಮಾಡಿಕೊಂಡು ಅವರಿಗೆ ಆಗಲೇ ಪರಿಹಾರವನ್ನೂ ನೀಡಿತ್ತು. ಆದರೆ ಅಧೀಕೃತವಾಗಿ ಪಹಣಿ ಪತ್ರಿಕೆಯನ್ನು ಸರ್ಕಾರದ ಸುಪರ್ದಿಗೆ ಮಾಡಿಕೊಂಡಿರಲಿಲ್ಲ. ಇದರಿಂದಾಗಿ ದಶಕದ ನಂತರವೂ ರೈತರ ಹೆಸರಿನಲ್ಲೇ ಆ ಜಮೀನು ಉಳಿದುಕೊಂಡಿದ್ದವು. ಕೆಲ ರೈತರು ಸರ್ಕಾರಕ್ಕೆ ಕೆರೆಗೆ ಭೂಮಿ ಕೊಟ್ಟಿದ್ದರೂ ಪಹಣಿ ಮುಂದುವರಿದಿದ್ದರಿಂದ ಅವುಗಳನ್ನೇ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು ಸಾಲ ಪಡೆಯುವುದು, ಬೆಳೆ ಸಾಲ ಪಡೆಯುವುದನ್ನು ಮಾಡುತ್ತಿದ್ದರು. ಇಂತಹ ಕೆಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾಳಜಿ ವಹಿಸುವ ಕೆಲಸ ಮಾಡಿದೆ.

ಇದರ ಬೆನ್ನಲ್ಲೇ ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಕೆರೆಗಳ ಉಳಿವಿಗೆ ಆಂದೋಲನ ನಡೆದಿದ್ದರಿಂದ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಕೆರೆಗಳ ಬಗ್ಗೆಕಾಳಜಿ ವಹಿಸಿ ಒತ್ತುವರಿಯಾದ ಕೆರೆಗಳನ್ನು ತೆರವು ಮಾಡುವಂತೆ ಸರ್ಕಾರಕ್ಕೆ, ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗಕ್ಕೆ ಒತ್ತಾಯಿಸಿದ್ದರಿಂದ ಜಿಲ್ಲಾಡಳಿತವು ಮತ್ತಷ್ಟು ಕೆರೆಗಳ ರಕ್ಷಣೆ ಮಾಡುವ ಕಾಯಕ ಆರಂಭಿಸಿದೆ.

22 ಕೆರೆಗಳಿಗೆ ಆರ್‌ಟಿಸಿ ನಮೂದು: ಕೊಪ್ಪಳ ಎಸಿ ನಾರಾಯಣರಡ್ಡಿ ಕನಕರಡ್ಡಿ ಅವರು, ಜಿಲ್ಲಾಡಳಿತದಿಂದ ಕೆರೆಗಳಿಗೆ ಭೂಮಿ ಸ್ವಾಧೀನವಾದ ಮಾಹಿತಿ ಪಡೆದು, ಸರ್ಕಾರದಿಂದ ರೈತರಿಗೆ ಪರಿಹಾರ ತಲುಪಿದ ಬಗ್ಗೆ ದಾಖಲೆ ಪರಿಶೀಲಿಸಿ ಅಂತಹ ಕೆರೆಗಳನ್ನು ಗುರುತಿಸಿ ಸರ್ಕಾರದ ಸುಪರ್ದಿಯಲ್ಲಿ ಗಣಕೀಕೃತ ದಾಖಲೆ ಮಾಡಿದ್ದಾರೆ. 22 ಕೆರೆಗಳಿಗೆ ನಿಖರ ಪಹಣಿ ಪತ್ರಿಕೆಗಳೇ ಇರಲಿಲ್ಲ. ಅದಕ್ಕೆ ಎಸಿ ಅವರು ಎಷ್ಟು ಕ್ಷೇತ್ರ ವ್ಯಾಪ್ತಿಯ ಕೆರೆ ಸ್ವಾಧೀನಕ್ಕೆ ಒಳಗಾಗಿದೆ. ಎಷ್ಟು

ಎಕರೆ ಪ್ರದೇಶವನ್ನು ಒಳಗೊಂಡಿದೆ ಎನ್ನುವುದನ್ನು ನಿಖರವಾಗಿ ಅಳತೆ ಮಾಡಿ ಕೆಲವುಸ್ಥಳಕ್ಕೆ ಭೇಟಿ ನೀಡಿ ವಿವಾದಿತ ಕೆರೆಗಳನ್ನು ಪರಿಶೀಲನೆಮಾಡಿ ಅವುಗಳಿಗೆ ದಾಖಲೀಕರಣ ಮಾಡಲು ಪಹಣಿ ಪತ್ರಿಕೆ(ಆರ್‌ಟಿಸಿ) ಭಾಗ್ಯ ಕರುಣಿಸಿದ್ದಾರೆ.ಇದರಿಂದ ಕೆರೆಗಳ ರಕ್ಷಣೆಯ ಕಾಯಕವು ಸದ್ದಿಲ್ಲದೆ ಆರಂಭವಾಗಿದೆ.

Advertisement

ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ: ಸಣ್ಣ ನೀರಾವರಿ ಇಲಾಖೆಯಡಿ 122 ಕೆರೆಗಳು ಇವೆ. ಅವುಗಳನ್ನು ಇಲಾಖೆಯು ದಾಖಲೆಯಲ್ಲಿ ಮಾತ್ರ ಇಟ್ಟುಕೊಂಡಿದೆ. ಆದರೆ ಅಲ್ಲಿ ಕೆರೆಗಳು ಒತ್ತುವರಿಯಾಗಿವೆ. ಇಲಾಖೆ ಈ ಇಲಾಖೆ ಕೆರೆಗಳ ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿದರೆ ಮಾತ್ರ ಭವಿಷ್ಯದಲ್ಲಿ ಕೆರೆಗಳು ಉಳಿಯಲಿವೆ. ಇಲ್ಲದಿದ್ದರೆ ಮತ್ತೆ ಉಳ್ಳವರ ಪಾಲಾಗಲಿವೆ ಎನ್ನುವ ಮಾತು ಕೇಳಿ ಬಂದಿದೆ. ಇನ್ನಾದರೂ ಸಣ್ಣ ನೀರಾವರಿ ಇಲಾಖೆ ಕೆರೆಗಳ ಒತ್ತುವರಿ, ನಿಖರತೆ, ರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕಿದೆ.

ಪಹಣಿಯಾದ ಕೆರೆಗಳು :  ಭಾನಾಪುರ, ಹುಣಸಿಹಾಳ, ಗಾಣದಾಳ,ಚನ್ನಪ್ಪನಹಳ್ಳಿ ಕೆರೆ, ಚಿಕ್ಕ ಮ್ಯಾಗೇರಿ ಕೆರೆ,ರ್ಯಾವಣಕಿ, ಗುನ್ನಾಳ, ನಿಲೋಗಲ್‌, ಕಲ್ಲಬಾವಿ,  ಬಳ್ಳೋಟಗಿ, ತಳಕಲ್‌, ಮುರಡಿ, ಬೆಣಕಲ್‌, ಮಲಕಸಮುದ್ರ, ನೆಲಜೇರಿ, ಕಟಗಿಹಳ್ಳಿ, ಹೊಸೂರು, ದ್ಯಾಂಪೂರ, ಚಿಕ್ಕ ಮನ್ನಾಪೂರ, ತಲ್ಲೂರ, ವಟಪರ್ವಿ, ತರಲಕಟ್ಟಿ ಕೆರೆಗಳಿಗೆ ಪಹಣಿ ಭಾಗ್ಯ ಬಂದಿದೆ. ಇವೆಲ್ಲವೂ ಸೇರಿ 760 ಎಕರೆ ಪ್ರದೇಶದಷ್ಟು ಒಳಗೊಂಡಿವೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಈ ಹಿಂದೆ ಸರ್ಕಾರ 1980 ಹಾಗೂ 1990ರ ದಶಕದಲ್ಲಿ ಕೆರೆಗಳಿಗಾಗಿ ರೈತರ ಜಮೀನು ಸ್ವಾಧೀನ ಮಾಡಿ, ಅವರಿಗೆ ಪರಿಹಾರವನ್ನೂ ಕೊಟ್ಟಿತ್ತು. ಆದರೆ ಅವುಗಳಿಗೆ ಪಹಣಿ ಪತ್ರಿಕೆ ಮಾಡಿರಲಿಲ್ಲ. ಇನ್ನೂ ರೈತರ ಹೆಸರಿನಲ್ಲೇ ಇದ್ದವು. ಅಂತಹವುಗಳನ್ನು ಗುರುತಿಸಿ 22 ಕೆರೆಗಳಿಗೆ ಪಹಣಿ ಪತ್ರಿಕೆ ಮಾಡಿದ್ದೇವೆ. ಇನ್ನೂ ಇಂತಹ ಕೆರೆಗಳು ಇವೆ. ಅವುಗಳಿಗೂ ಪಹಣಿ ಪತ್ರಿಕೆಯ ಪ್ರಕ್ರಿಯೆ ನಡೆದಿದೆ.- ನಾರಾಯಣರಡ್ಡಿ ಕನಕರಡ್ಡಿ, ಕೊಪ್ಪಳ ಎಸಿ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next