Advertisement

ಮಂಗಳೂರು: ಊರಿಗೆ ಕಳುಹಿಸಿಕೊಡುವಂತೆ ಅಗ್ರಹಿಸಿ ಯು.ಪಿ, ಬಿಹಾರದ ಕಾರ್ಮಿಕರಿಂದ ಪ್ರತಿಭಟನೆ

03:58 PM May 06, 2020 | keerthan |

ಮಂಗಳೂರು: ಇಲ್ಲಿ ಕೆಲಸಕ್ಕೆಂದು ಬಂದಿರುವ ನಮಗೆ ಈಗ ಊಟ ವ್ಯವಸ್ಥೆ ಇಲ್ಲ, ನಮಗೆ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಸಾವಿರಾರು ವಲಸೆ ಕಾರ್ಮಿಕರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮಂಗಳೂರು ಮಹಾನಗರ ಪಾಲಿಕೆ ಎದುರುಗಡೆ ಈ ಧರಣಿ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ನಮಗೆ ಊಟ ಇಲ್ಲ ಊರಿಗೆ ಕಳುಹಿಸಿ ಎಂದು ಈ ವಲಸೆ ಕಾರ್ಮಿಕರು ಅಗ್ರಹಿಸುತ್ತಿದ್ದಾರೆ. ಆದರೆ ಈ ಕಾರ್ಮಿಕರು ಸಾಮಾಜಿಕ ಅಂತರ ಮರೆತು ಧರಣಿ ನಡೆಸುತ್ತಿದ್ದಾರೆ.

ಸಾಮಾಜಿಕ ಅಂತರ ಮರೆತು ಧರಣಿ ನಡೆಸುತ್ತಿರುವ ಕಾರ್ಮಿಕರನ್ನ ಚದುರಿಸೋ ಕಾರ್ಯವನ್ನು ಪೊಲೀಸರು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next