Advertisement

ಆಸ್ತಿ ಕಲಹ: ಕೊಡಲಿಯಿಂದ ಅಣ್ಣನನ್ನೇ ಕೊಂದ ತಮ್ಮ

11:16 PM Jun 29, 2019 | Team Udayavani |

ಹರಪನಹಳ್ಳಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಡಲಿಯಿಂದ ಹೊಡೆದು ಕೊಂದಿರುವ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಎರಡೆತ್ತಿನಹಳ್ಳಿಯಲ್ಲಿ ಶನಿವಾರ ನಡೆದಿದೆ. ಕೊಡಲಿ ಏಟಿನಿಂದ ಹಾಲೇಶ್‌ (35) ಮೃತಪಟ್ಟಿದ್ದು, ಆರೋಪಿ ಹೊನ್ನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಸಹೋದರರ ಮಧ್ಯೆ ಆಸ್ತಿ ಮತ್ತು ಸಾಲ ಹಂಚಿಕೆ ವಿಷಯವಾಗಿ ವಿವಾದ ಉಂಟಾಗಿತ್ತು. ಶನಿವಾರ ಬೆಳಗ್ಗೆ ಹಾಲೇಶ್‌ ಮಲಗಿದ್ದ ವೇಳೆ ಪಕ್ಕದ ಮನೆಯಲ್ಲೇ ವಾಸವಿರುವ ಸಹೋದರ ಹೊನ್ನಪ್ಪ ಏಕಾಏಕಿ ಮನೆಗೆ ನುಗ್ಗಿ ಕೊಡಲಿಯಿಂದ ಅಣ್ಣನ ಮೇಲೆ ಹಲ್ಲೆ ಮಾಡಿದ್ದಾನೆ. ತಲೆಗೆ ಕೊಡಲಿ ಏಟು ಬಿದ್ದ ಪರಿಣಾಮ ಹಾಲೇಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆಂದು ಪೋಲೀಸರು ಹೇಳಿದರು. ಹಾಲೇಶ್‌ ಪತ್ನಿ ಕವಿತಾ ಹರಪನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next