Advertisement

ಗ್ರಾಮ ಪಂಚಾಯತ್; ನಾಮಕರಣ ಮಾಡಿದರೆ ಚಳವಳಿ: ರೈ

10:57 AM May 23, 2020 | mahesh |

ಮಂಗಳೂರು: ಗ್ರಾಮ ಪಂಚಾಯತ್‌ಗಳ ಅವಧಿ ಮುಗಿಯುವ ಕಾರಣದಿಂದಾಗಿ ತತ್‌ಕ್ಷಣವೇ ಎಲ್ಲ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡಬೇಕು ಅಥವಾ ಹಾಲಿ ಇರುವ ಆಡಳಿತ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಮಾಜಿ ಸಚಿವ ಬಿ. ರಮಾನಾಥ ರೈ ಒತ್ತಾಯಿಸಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಸದ್ಯ ಕೋವಿಡ್ ಕಾರಣಕ್ಕಾಗಿ ಚುನಾವಣೆ ಮುಂದೂಡುವುದು ಅನಿವಾರ್ಯ ಎಂಬುದು ನಿಜ. ಆದರೆ ಇದನ್ನು ನೆಪವಾಗಿಸಿ ನಾಮಕರಣ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ನಾಮಕರಣ ಮಾಡಲು ಮುಂದಾದರೆ ನಿರಂತರ ಚಳವಳಿ ನಡೆಸುವುದಾಗಿ ಎಚ್ಚರಿಸಿದರು. .ಗಳಿಗೆ ನಾಮಕರಣ ಮಾಡುವುದರಿಂದ ಪಂ.ರಾಜ್‌ ವ್ಯವಸ್ಥೆ ದುರ್ಬಲ ವಾಗಲಿದೆ. ಸರಕಾರ ಪಂ. ಆಡಳಿತ ವ್ಯವಸ್ಥೆಯನ್ನು ಹಾಳುಗೆಡವಲು ಹೊರಟಿದೆ ಎಂದವರು ದೂರಿದರು. ಪಂ. ಆಡಳಿತವನ್ನು ದುರ್ಬಲಗೊಳಿಸುವ ಕಾರ್ಯಕ್ಕೆ ಬಿಜೆಪಿ ಚಾಲನೆ ನೀಡಿದೆ. ಆದರೆ ಪಂ.ರಾಜ್‌ ವ್ಯವಸ್ಥೆಗೆ ಬಲ ನೀಡಿರುವುದು ಕಾಂಗ್ರೆಸ್‌ ಎಂದವರು ಹೇಳಿದರು.

ಇಬ್ರಾಹಿಂ ಕೋಡಿಜಾಲ್‌, ಅಬ್ದುಲ್‌ ರವೂಫ್, ಶಶಿಧರ ಹೆಗ್ಡೆ, ಶಾಹುಲ್‌ ಹಮೀದ್‌, ನವೀನ್‌ ಡಿ’ಸೋಜಾ, ಅಶೋಕ್‌ ಡಿ.ಕೆ., ಅಪ್ಪಿ, ಮುಂತಾದವರು ಉಪಸ್ಥಿತರಿದ್ದರು.

ನಳಿನ್‌ ಮೇಲೆ ಸಾವಿರ ಎಫ್ಐಆರ್‌ !
ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಆಗಿರುವ ಎಫ್ಐಆರ್‌ ಅನ್ನು ಹಿಂಪಡೆಯಬಾರದು ಎಂಬ ಸಂಸದ ನಳಿನ್‌ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮಾನಾಥ ರೈ, ನಳಿನ್‌ ತಿಳುವಳಿಕೆಯಿಲ್ಲದೆ ಮಾತನಾಡುತ್ತಾರೆ. ನಳಿನ್‌ ಕುಮಾರ್‌ ಮೇಲೆಯೂ ಸಾವಿರಾರು ಎಫ್ಐಆರ್‌ ದಾಖಲಿಸಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next