Advertisement

Progress review meeting: ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲಾಧಿಕಾರಿ,ಎಸ್ಪಿ ಗೈರು: ಅಸಮಾಧಾನ

02:32 PM Oct 28, 2023 | Team Udayavani |

ರಾಮನಗರ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಾಷ್ಟ್ರೀಯ ಆಯೋಗ(ಎನ್‌ಸಿಎಸ್‌ಸಿ) ಸದಸ್ಯೆ ಡಾ. ಅಂಜುಬಾಲ ಅವರು ಕರೆದಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲಾಧಿಕಾರಿ,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೈರಾಗಿದ್ದರಿಂದ ಕುಪಿತ ಗೊಂಡ ಡಾ.ಅಂಜುಬಾಲ ಸಭೆಯನ್ನು ರದ್ದುಪಡಿಸಿ ಹಿಂದಿರುಗಿದ ಘಟನೆ ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆಯಿತು.

Advertisement

ರಾಜ್ಯ ಪ್ರವಾಸ ಕೈಗೊಂಡಿರುವ ಎನ್‌ಸಿಎಸ್‌ಸಿ ಸದಸ್ಯೆ ಡಾ.ಅಂಜುಬಾಲ ಅವರು ಗುರುವಾರ ಸಂಜೆ ಜಿಪಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಕರೆದಿದ್ದರು.ಸಭೆಗೆ ಜಿಪಂ ಸಿಇಒ ಹೊರತುಪಡಿಸಿ ಜಿಲ್ಲಾಧಿಕಾರಿ ಡಾ.ಅವಿನಾಶ್‌ಮೆನನ್‌ ರಾಜೇಂದ್ರನ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ ಗೈರಾಗಿದ್ದು, ಅಪರ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಭೆಗೆ ಬಂದಿದ್ದರು. ಜಿಲ್ಲೆಯ ಮುಖ್ಯಸ್ಥರು ಗೈರು ಹಾಜರಾಗಿರುವುದನ್ನು ತಿಳಿಯುತ್ತಿದ್ದಂತೆ ಗರಂ ಆದ ಡಾ.ಅಂಜುಬಾಲ, ಸಮಿತಿಯ ಸಭೆ ಎಂದರೆ ಏನೆಂದುಕೊಂಡಿ ದ್ದೀರಾ? ಅವರನ್ನು ಸಭೆಗೆ ಕರೆಸಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಯಾಕೆ ಸಭೆಗೆ ಬಂದಿಲ್ಲ ಎಂದು ಸಭೆಯಲ್ಲಿದ್ದ ಜಿಪಂ ಸಿಇಒ ದಿಗ್ವಿಜಯ್‌ ಬೋಡ್ಚೆ ಅವರನ್ನು ತರಾಟೆಗೆ ತೆಗೆದುಕೊಂಡರು.

ಇಂತಹ ಬೇಜವಾಬ್ದಾರಿತನವನ್ನು ನಾವೆಲ್ಲೂ ನೋಡಿಲ್ಲ ಎಂದು ಕುರ್ಚಿಯಿಂದ ಎದ್ದು ಹೊರ ನಡೆದರು.

ಡಿಸಿ ವಿರುದ್ಧ ಗರಂ: ಎನ್‌ಸಿಎಸ್ಸಿ ಸದಸ್ಯರು ಗರಂ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಅವಿನಾಶ್‌ ಮೆನನ್‌ ಮತ್ತು ಎಸ್ಪಿ ಕಾರ್ತಿಕ್‌ರೆಡ್ಡಿ ಆಗಮಿಸಿ ಅವರನ್ನು ಸಮಾಧಾನ ಮಾಡಲು ಮುಂದಾದರಾದರೂ ಇವರ ಮಾತಿಗೆ ಶಾಂತರಾಗದ ಸದಸ್ಯೆ ಡಾ.ಅಂಜುಬಾಲ ನಿಮ್ಮಊರಿಗೆ ನಾನು ಬಂದಿದ್ದೇನೆ, ನನ್ನನ್ನು ನೀವು ಸ್ವಾಗತಿಸಬೇಕೋ, ಇಲ್ಲ ನಿಮ್ಮನ್ನು ನಾನು ಸ್ವಾಗತಿಸಬೇಕೋ ಎಂದು ತರಾಟೆಗೆ ತೆಗೆದುಕೊಂಡರು.

ಕೋರ್ಟ್‌ ವಿಚಾರಣೆ ಇದಿದ್ದರಿಂದ ಬರಲಾಗಲಿಲ್ಲ ಎಂದು ಜಿಲ್ಲಾಧಿಕಾರಿ ಸಮಜಾಯಿಷಿ ನೀಡಿ ದರಾದರೂ, ಇವರ ಮಾತಿನಿಂದ ಸಮಾಧಾನಗೊಳ್ಳದ ಡಾ.ಅಂಜುಬಾಲ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಜಿಪಂ ಕಚೇರಿಯಿಂದ ಇಳಿದು ಹೊರಗೆ ಬಂದರು.

Advertisement

ದಲಿತ ಮುಖಂಡರ ಆಕ್ರೋಶ: ಸಭೆ ರದ್ದುಪಡಿಸಿ ಹೋಗುತ್ತಿದ್ದ ಡಾ. ಅಂಜುಬಾಲ ಅವರನ್ನು ಜಿಪಂ ಸಭಾಂಗಣದ ಹೊರಗೆ ಭೇಟಿ ಮಾಡಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ತಮಗೆ ಸಭೆಗೆ ಆಹ್ವಾನ ನೀಡಿಲ್ಲ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹೆಚ್ಚಿನ ದೌರ್ಜನ್ಯವಾಗುತ್ತಿದೆ. ಪೊಲೀಸರು ಇದನ್ನು ನಿಯಂತ್ರಿಸುತ್ತಿಲ್ಲ. ಜಿಲ್ಲಾಡಳಿತ ದಲಿತರ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ದೂರುಗಳ ಸುರಿಮಳೆ ಗರೆದರು. ಸಮಿತಿಯ ಸದಸ್ಯರಿಗೆ ತಮ್ಮ ವಿಸಿಟಿಂಗ್‌ ಕಾರ್ಡ್‌ ನೀಡಿ ಏನಾದರು ಸಮಸ್ಯೆಯಾದರೆ ನನ್ನನ್ನು ಸಂಪರ್ಕಿಸಿ ಎಂದು ಹೇಳಿ ಅಲ್ಲಿಂದ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next