Advertisement

ನೂತನ ಕಾರ್ಯಾಧ್ಯಕ್ಷ  ಸಿಎ ಐ. ಆರ್‌. ಶೆಟ್ಟಿ  ತಂಡದ ಪದಗ್ರಹಣ

11:40 AM Mar 25, 2021 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿಯ 2021-2023ನೇ ಅವಧಿಯ ನೂತನ ಕಾರ್ಯಾಧ್ಯಕ್ಷರಾಗಿ ಲೆಕ್ಕ ಪರಿಶೋಧಕ ಸಿಎ ಐ. ಆರ್‌. ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು.

Advertisement

ಮಾ. 10ರಂದು ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ  ಸಮಿತಿಯ ಉಪ ಕಾರ್ಯಾಧ್ಯಕ್ಷರಾಗಿ ಆದರ್ಶ್‌ ಬಿ. ಶೆಟ್ಟಿ, ಕಿಶೋರ್‌ ಕುಮಾರ್‌ ಕುತ್ಯಾರ್‌, ಕಾರ್ಯದರ್ಶಿಯಾಗಿ ಸಿಎ ವಿಶ್ವನಾಥ್‌ ಶೆಟ್ಟಿ, ಕೋಶಾಧಿಕಾರಿಯಾಗಿ ಸಿಎ ಪ್ರದೀಪ್‌ ಜೆ. ಶೆಟ್ಟಿ  ಆಯ್ಕೆಯಾದರು.

ಸಂಘದ ಉನ್ನತ ಶಿಕ್ಷಣ ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷ ಎನ್‌. ವಿವೇಕ್‌ ಶೆಟ್ಟಿ ಅವರು ನೂತನ ಕಾರ್ಯಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ಅವರಿಗೆ ಪದವಿ ಹಸ್ತಾಂತರಿಸಿದರು. ನಿರ್ಗಮನ ಉಪಾಧ್ಯಕ್ಷರಾದ ಕಿಶೋರ್‌ ಕುಮಾರ್‌ ಕುತ್ಯಾರ್‌, ಮಮತಾ ಎಂ. ಶೆಟ್ಟಿ , ನಿರ್ಗಮನ ಕಾರ್ಯದರ್ಶಿ ಭಾಸ್ಕರ್‌ ಶೆಟ್ಟಿ ಕಾರ್ನಾಡ್‌, ನಿರ್ಗಮನ ಕೋಶಾಧಿಕಾರಿ ಸಿಎ ರಮೇಶ್‌ ಬಿ. ಶೆಟ್ಟಿ ಇವರು ಉನ್ನತ ಶಿಕ್ಷಣ ಸಮಿತಿಯ ನೂತನ ಪದಾಧಿಕಾರಿಗಳಿಗೆ ಪದವಿ ಹಸ್ತಾಂತರಿಸಿ ಶುಭ ಹಾರೈಸಿದರು.

ಇದೇ ವೇಳೆ ಉನ್ನತ ಶಿಕ್ಷಣ ಕಾಲೇಜಿನಲ್ಲಿ ಈಗಾಗಲೇ ವಿವಿಧ ಸೌಲಭ್ಯ ಒದಗಿಸಿದ ದಾನಿಗಳಾದ ಮನ್‌ಮೋಹನ್‌ ಆರ್‌. ಶೆಟ್ಟಿ , ಅಣ್ಣಾಲೀಲಾ ಕಾಲೇಜಿನ ಪ್ರತಿನಿಧಿ ಶೋಭಾ ಜಯರಾಮ ಶೆಟ್ಟಿ, ಕಾಲೇಜಿನ ಪ್ರತಿನಿಧಿ ಶಶಿಕಿರಣ್‌ ಶೆಟ್ಟಿ, ಬಿ. ಡಿ. ಶೆಟ್ಟಿ, ಸುಧಾಕರ ಎಂ. ಶೆಟ್ಟಿ , ಕೃಷ್ಣ ವೈ. ಶೆಟ್ಟಿ, ಗೌರವ್‌ ಆರ್‌. ಪಯ್ಯಡೆ, ಸಮಿತಿಯ ಸದಸ್ಯರಾದ ಪ್ರಮೋದ್‌ ಶೆಟ್ಟಿ, ರಂಜಿತ್‌ ಶೆಟ್ಟಿ , ಮಹೇಶ್‌ ಆರ್‌. ಶೆಟ್ಟಿ, ಬಿ. ವಿವೇಕ್‌ ಶೆಟ್ಟಿ, ದಿನಕರ ಎನ್‌. ಶೆಟ್ಟಿ , ಹರೀಶ್‌ ಎಸ್‌. ಶೆಟ್ಟಿ, ಪುಷ್ಪರಾಜ್‌ ಶೆಟ್ಟಿ, ಜಯ ಎ. ಶೆಟ್ಟಿ , ಪ್ರಸನ್ನ ಜೆ. ಶೆಟ್ಟಿ, ಭರತ್‌ ವಿ. ಶೆಟ್ಟಿ, ಹರೀಶ್‌ ವಾಸು ಶೆಟ್ಟಿ , ಕೆ. ಸಿ. ಶೆಟ್ಟಿ , ಸಲಹೆಗಾರರಾಗಿ ಐಕಳ ಹರೀಶ್‌ ಶೆಟ್ಟಿ, ಸಿಎ ಶಂಕರ್‌ ಬಿ. ಶೆಟ್ಟಿ , ಸುಧಾಕರ ಎಸ್‌. ಹೆಗ್ಡೆ, ರವಿ ಎಸ್‌. ಶೆಟ್ಟಿ , ಉನ್ನತ ಶಿಕ್ಷಣ ಸಮಿತಿಯ ನೂತನ ಸಂಚಾಲಕರಾಗಿ ಭಾಸ್ಕರ್‌ ಶೆಟ್ಟಿ ಕಾರ್ನಾಡ್‌ ಅವರು ನೇಮಕಗೊಂಡಿದ್ದಾರೆ ಎಂದು ನೂತನ ಕಾರ್ಯಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ  ಪ್ರಕಟಿಸಿದರು.

ಸಂಘದ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್‌ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ಇಂದ್ರಾಳಿ ದಿವಾಕರ ಶೆಟ್ಟಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್‌.

Advertisement

ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್‌ ಡಿ. ಶೆಟ್ಟಿ ಅವರು ನೂತನ ಕಾರ್ಯಾಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌. ಕೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ  ಮುಂಡ್ಕೂರು

 

Advertisement

Udayavani is now on Telegram. Click here to join our channel and stay updated with the latest news.

Next