Advertisement

ಗಾಣಿಗ ಸಂಘಟನೆ: ಸಾಧಕರಿಗೆ ಸಮ್ಮಾನ

10:23 PM Mar 19, 2021 | Team Udayavani |

ಕೋಟ: ಗಾಣಿಗ ಯುವ ಸಂಘಟನೆ ಕೋಟ ಘಟಕ ಹಾಗೂ ಗಾಣಿಗ ಮಹಿಳಾ ಸಂಘಟನೆ ಕೋಟ ಆಶ್ರಯದಲ್ಲಿ ಇಲ್ಲಿನ ಅಘೋರೇಶ್ವರ ದೇಗುಲದ ಸಭಾಭವನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಜರಗಿತು.

Advertisement

ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ವಾಸುದೇವ ಬೈಕಾಡಿ ಮಾತನಾಡಿದರು. ಅಘೋರೇಶ್ವರ ದೇಗುಲದ ಪ್ರಧಾನ ಅರ್ಚಕ ಬಾಲಕೃಷ್ಣ ನಕ್ಷತ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ ಕೆ.ಗೋಪಾಲ್‌ ಮತ್ತು ಅವರ ಪತ್ನಿ ವಸಂತಿ ಕೆ.ಗೋಪಾಲ್‌, ಮಾಜಿ ಪ್ರಧಾನ ಕಾರ್ಯದರ್ಶಿ ನಾಗರಾಜ್‌ ಗಾಣಿಗ ಸಾಲಿಗ್ರಾಮ, ಐರೋಡಿ ಗ್ರಾ.ಪಂ. ಉಪಾಧ್ಯಕ್ಷ ನಟರಾಜ್‌ ಗಾಣಿಗ, ಆವರ್ಸೆ ಗ್ರಾ.ಪಂ. ಉಪಾಧ್ಯಕ್ಷ ದಿವಾಕರ ಗಾಣಿಗ, ನಿವೃತ್ತ ಯೋಧ ಸತೀಶ್‌ ಗಾಣಿಗ ಕಾರ್ಕಡ, ಕ್ರೀಡಾ ಸಾಧಕಿ ಪ್ರಜ್ಞಾ, ಹಿರಿಯ ಮಹಿಳೆಯರಾದ ವಿಮಲ ಗಾಣಿಗ ಅಚಾÉಡಿ, ಯಶೋಧ ಗಾಣಿಗ ಚಿತ್ರಪಾಡಿ ಅವರನ್ನು ಸಮ್ಮಾನಿಸಲಾಯಿತು.

ಸಂಘಟನೆಯ ಅಧ್ಯಕ್ಷ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಸೂರ್ಯನಾರಾಯಣ ಗಾಣಿಗ, ಉದಯ ಕೆ., ಉಡುಪಿ ಜಿಲ್ಲಾ ಗಾಣಿಗ ಯುವಸಂಘಟನೆ ಅಧ್ಯಕ್ಷ ದಿನೇಶ್‌ ಗಾಣಿಗ ಕೋಟ, ಲೋಕೋಪಯೋಗಿ ಗುತ್ತಿಗೆದಾರ ಶೇವಧಿ ಸುರೇಶ್‌ ಗಾಣಿಗ, ಮಹಿಳಾ ಸಂಘದ ಗೌರವಾಧ್ಯಕ್ಷೆ ಪ್ರೇಮಾ ಸುಬ್ರಾಯ ಗಾಣಿಗ ಕಾರ್ಕಡ ಉಪಸ್ಥಿತರಿದ್ದರು. ಮಹಿಳಾ ಸಂಘಟನೆಯ ಅಧ್ಯಕ್ಷ ಅನಿತಾ ಶ್ರೀಧರ ಗಾಣಿಗ ಸ್ವಾಗತಿಸಿ, ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಗಾಣಿಗ ಪ್ರಸ್ತಾವಿಸಿದರು. ರಾಧಾಕೃಷ್ಣ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿ, ಗಿರೀಶ್‌ ಬೆಟ್ಲಕ್ಕಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next