Advertisement

ಶ್ರೀ ಶನೇಶ್ವರ ಸ್ವಾಮಿಯ ಮಹಾ ರಥೋತ್ಸವ

07:30 PM Feb 19, 2021 | Team Udayavani |

ಬೇಲೂರು: ಶ್ರೀಶನೇಶ್ವರ ಸ್ವಾಮಿಯವರ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಶ್ರೀಶನೇಶ್ವರ ಸ್ವಾಮಿಯ ಮಹಾ ರಥೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ವಿಶೇಷ ಪೂಜೆಯೊಂದಿಗೆ ಮಧ್ಯಾಹ್ನ ಶ್ರೀಶನೇಶ್ವರಸ್ವಾಮಿಯ ಮಹಾ ರಥೋತ್ಸವಕ್ಕೆ ಶ್ರೀಶನೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಹಾಗೂ ಸಮಿತಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

Advertisement

ಈ ವೇಳೆ ಸಾವಿರಾರು ಭಕ್ತ ರಥ ಎಳೆದು ಶನೇಶ್ವರಸ್ವಾಮಿಯ ಕೃಪೆಗೆ ಪಾತ್ರರಾದರು. ಸಂಪ್ರದಾಯ ಮುಂದುವರಿಕೆ: ಮಹಾ ರಥೋತ್ಸವದ ನಂತರ ಮಾತನಾಡಿದ ಶ್ರೀಶನೇ ಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಶ್ರೀಶನೇಶ್ವರಸ್ವಾಮಿಯ ಮಹಾ ರಥೋತ್ಸವವನ್ನು ನಮ್ಮ ಹಿರಿಯರು ಹಿಂದಿನಿಂದಲೂ ನೆರವೇರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ನಾವೂ ನೆರವೇರಿಸುತ್ತಿದ್ದೇವೆಂದರು.

ಮಹಾ ರಥೋತ್ಸವದಲ್ಲಿ ಸುಮಾರು 25 ಗ್ರಾಮಗಳು ಸೇರಿದಂತೆ ಬೇಲೂರು ಪಟ್ಟಣದ ಜನತೆ ಹೆಚ್ಚು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಧನ್ಯರಾದರು. ನಂತರ ಸಾವಿರಾರು ಭಕ್ತರಿಗೆ ಶ್ರೀಶನೇಶ್ವರಸ್ವಾಮಿ ದೇವಾಲಯ ಸಮಿತಿಯಿಂದ ಅನ್ನ ಸಂತರ್ಪಣೆ ನಡೆಯಿತು. ರಥೋತ್ಸವದಲ್ಲಿ ಶ್ರೀಶನೇಶ್ವರಸ್ವಾಮಿ ದೇವಾಲಯ ಸಮಿತಿ ಕಾರ್ಯದರ್ಶಿ ಎಚ್‌. ಎಂ.ದಯಾನಂದ್‌, ನಿರ್ದೇಶಕರಾದ ಎಂ.ಎ.ನಾಗರಾಜ್‌, ಸಿ.ಎಸ್‌.ಪ್ರಕಾಶ್‌, ಧರ್ಮೇಗೌಡ, ಕೇಶವಮೂರ್ತಿ, ಬಿಟ್ರಾವಳ್ಳಿ ಉಮೇಶ್‌, ಶಾಂತೇಗೌಡ, ಸುತ್ತಮುತ್ತಲಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next