Advertisement

ಹೆಲಿಟೂರಿಸಂಗೆ ಮರ ಹನನ ವಿರೋಧಿಸಿ ಭಿತ್ತಿ ಪತ್ರ

03:21 PM Apr 19, 2021 | Team Udayavani |

ಮೈಸೂರು: ನಗರದ ಲಲಿತಮಹಲ್‌ಆವರಣದಲ್ಲಿ ಹೆಲಿ ಟೂರಿಸಂ ಹೆಸರಿನಲ್ಲಿಮರಗಳನ್ನು ಕಡಿಯಲು ಹೊರಟಿರುವಪ್ರವಾಸೋದ್ಯಮ ಇಲಾಖೆಯಯತ್ನವನ್ನು ಖಂಡಿಸಿ ಪರಿಸರ ಬಳಗದಸದಸ್ಯರು ವಿವಿಧ ಭಿತ್ತಿ ಪತ್ರಗಳನ್ನುಹಿಡಿದು ವಿಶೇಷ ಜಾಗೃತಿ ಕಾರ್ಯಕ್ರಮನಡೆಸಿದರು.

Advertisement

“ವೃಕ್ಷೋ ರಕ್ಷತಿ ರಕ್ಷಿತಃ’, “ಪರಿಸರಉಳಿವು-ನಮ್ಮ ಉಳಿವು ಪರಿಸರದಅಳಿವು ನಮ್ಮ ಅಳಿವು'”ನಿಲ್ಲಲಿ ಮರಗಳಹನನ ಬೆಳೆಸಲಿ ಅಲ್ಲಲ್ಲಿ ಕಾನನ’, ,””ಪ್ರಕೃತಿ ಮಾತೆ, ನಿಜವಾದ ಅನ್ನದಾತೆ’,”ಮರಗಳನ್ನು ಬೆಳೆಸೋಣ ಕಡಿಯುವುದನ್ನು ನಿಲ್ಲಿಸೋಣ, ಕಡಿದರೆ ಮರಬರುವುದು ಬರ ಮುಂತಾದ ಘೋಷಣೆಗಳನ್ನು ಹೊತ್ತ ಫ‌ಲಕ ಪ್ರದರ್ಶಿಸಲಾಯಿತು.ಪರಿಸರ ಆಸಕ್ತರು ವಿವಿಧಭಿತ್ತಿಪತ್ರಗಳನ್ನು ಹಿಡಿದು ಅರಿವುಮೂಡಿಸಿದರು.

ಗಾಯಕ ನಾರಾಯಣಸ್ವಾಮಿ ತಂಡದ ಕಲಾವಿದರು ಪರಿಸರಗೀತೆಗಳನ್ನು ಹಾಡಿ ಮರಗಳ ಹನನಕ್ಕೆವಿರೋಧ ವ್ಯಕ್ತಪಡಿಸಿದರು.ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚನ್ನೇಗೌಡ ಮಾತನಾಡಿ, ಲಲಿತಮಹಲ್‌ ಮುಂಭಾಗ ಪ್ರಾಣಿಪಕ್ಷಿಗಳಸಂಕುಲಕ್ಕೆ ನೆಲೆಯಾಗಿದೆ. ಅಲ್ಲದೆ,ಸಾಕಷ್ಟು ಮಂದಿ ನಿತ್ಯ ವಾಯುವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ.

ನೂರಾರು ಯುವಕರ ಕ್ರೀಡಾಭ್ಯಾಸಕ್ಕೂಈ ತಾಣ ಆಧಾರವಾಗಿದ್ದು, ಇಲ್ಲಿನವಾತಾವರಣ ಹೀಗೆ ಇರಬೇಕುಎನ್ನುವುದು ಎಲ್ಲರ ಆಶಯ. ಆದ್ದರಿಂದಇಲ್ಲಿನ ಮರಗಳನ್ನು ಕಡಿಯುವುದುಸೂಕ್ತವಲ್ಲ ಎಂದರು. ಅಲ್ಲದೆ, ಕೊರೊನಾಎರಡನೇ ಅಲೆ ಇದೀಗ ಎಲ್ಲೆಡೆವೇಗವಾಗಿ ಹಬ್ಬುತ್ತಿದೆ. ಹಾಗಾಗಿಏ.23ರಂದು ಅರಣ್ಯ ಭವನದಲ್ಲಿಆಯೋಜಿಸಿರುವ ಸಾರ್ವಜನಿಕಅಹವಾಲು ಸಭೆಯನ್ನು ಮುಂದೂಡಬೇಕು ಎಂದು ಅರಣ್ಯಾಧಿಕಾರಿಗಳುಹಾಗೂ ಜಿಲ್ಲಾಧಿಕಾರಿಗೆ ಮನವಿಮಾಡಿದರು.

ಪರಿಸರ ಬಳಗದ ಪರಶುರಾಮೇಗೌಡ, ಅಂಕಣಗಾರ್ತಿ ಕುಸುಮಾಆಯರಹಳ್ಳಿ, ಹಿರಿಯ ರಂಗಕರ್ಮಿಜನಾರ್ದನ್‌ (ಜನ್ನಿ), ಗಾಯಕರಾದಡಾ.ನಿಂಗರಾಜು, ವಿಶ್ವನಾಥ್‌,ದೇವಾನಂದ ವರಪ್ರಸಾದ್‌, ರಮೇಶ್‌,ಹೊಸಳ್ಳಿ ಶಿವು, ಕ್ರೆಡಿಟ್‌ ಐ ಸಂಸ್ಥೆಯ ಡಾ.ಎಂ.ಪಿ. ವರ್ಷಾ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next