Advertisement

ಶೇಕಡವಾರು ಪದ್ಧತಿಗೆ ನಿರ್ಮಾಪಕರ ಸಂಘದ ಆಗ್ರಹ

09:56 AM Feb 05, 2020 | Lakshmi GovindaRaj |

ಸದ್ಯ ಇತರೆ ರಾಜ್ಯಗಳಲ್ಲಿ ಸದ್ಯ ಜಾರಿಯಲ್ಲಿ ಇರುವಂತೆ ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಫ್ಲೆಕ್ಸ್‌ ಚಿತ್ರಮಂದಿರಗಳಲ್ಲಿನ ಶೇಕಡವಾರು ಪದ್ದತಿಯನ್ನು ಕರ್ನಾಟಕದ ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಫ್ಲೆಕ್ಸ್‌ ಚಿತ್ರಮಂದಿರಗಳಲ್ಲೂ ಜಾರಿಗೆ ತರುವಂತೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಒತ್ತಾಯಿಸಿದೆ. ಸೋಮವಾರ ನಿರ್ಮಾಪಕರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ ರಾಮಕೃಷ್ಣ (ಪ್ರವೀಣ್‌ ಕುಮಾರ್‌), “ಕರ್ನಾಟಕವನ್ನು ಹೊರತುಪಡಿಸಿ ಬಹುತೇಕ ಬೇರೆ ಎಲ್ಲಾ ರಾಜ್ಯಗಳಲ್ಲೂ ಈಗಾಗಲೇ ಚಿತ್ರಗಳು ಏಕಪರದೆ ಮತ್ತು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಶೇಕಡವಾರು ಪದ್ಧತಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

Advertisement

ಆದರೆ ನಮ್ಮಲ್ಲಿ ಮಾತ್ರ ಕೆಲವು ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ ಗಳನ್ನು ಹೊರತುಪಡಿಸಿದರೆ, ಬಹುತೇಕ ಉಳಿದ ಬಹುತೇಕ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಬಾಡಿಗೆಯ ಆಧಾರದ ಮೇಲೆ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಮುಂಚಿತವಾಗಿಯೇ ನಿರ್ಮಾಪಕರು ಮತ್ತು ವಿತರಕರಿಂದ ಪ್ರದರ್ಶಕರು ಬಾಡಿಗೆಯನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಸಾಮಾನ್ಯ ನಿರ್ಮಾಪಕರಿಗೆ ದೊಡ್ಡ ದೊಡ್ಡ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗ ಬೇರೆ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲೂ ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲೂ ಶೇಕಡವಾರು ಪದ್ದತಿ ಜಾರಿಯಾಗಬೇಕು’ ಎಂದರು.

“ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಶೇಕಡವಾರು ಪದ್ದತಿ ಜಾರಿಯಾಗುವುದರಿಂದ ನಿರ್ಮಾಪಕರು, ವಿತರಕರು, ಪ್ರದರ್ಶಕರು ಎಲ್ಲರಿಗೂ ಅನುಕೂಲವಿದೆ. ಆದ್ದರಿಂದ ಎಲ್ಲರ ಸಮ್ಮತಿಯಿಂದ ಶೇಕಡವಾರು ಪದ್ದತಿ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಶೇಕಡವಾರು ಪದ್ದತಿಯ ಜಾರಿಯಿಂದಾಗುವ ಅನುಕೂಲ- ಅನಾನುಕೂಲತೆ ಗಳನ್ನು ಬಗ್ಗೆ ಅಧ್ಯಯನ ಮಾಡಲು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ವಲಯವನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.

ಶೀಘ್ರದಲ್ಲಿಯೇ ಈ ಸಮಿತಿ ವರದಿ ನೀಡಲಿದ್ದು, ಆ ನಂತರ ಚಿತ್ರರಂಗದ ಎಲ್ಲರೊಂದಿಗೆ ಚರ್ಚಿಸಿ ಶೇಕಡವಾರು ಪದ್ದತಿ ಜಾರಿಗೆ ತರಲಾಗುವುದು. ನಿರ್ಮಾಪಕರ ಸಂಘದ ನೇತೃತ್ವದ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಮಾರ್ಗದರ್ಶನದಂತೆ ಏಪ್ರಿಲ್‌ ಮೊದಲವಾರದಿಂದ ಶೇಕಡ ವಾರು ಪದ್ದತಿಯಲ್ಲಿ ಚಿತ್ರಗಳನ್ನು ಪ್ರದರ್ಶನಗೊಳ್ಳುವಂತೆ ಮಾಡುವ ಯೋಚನೆಯಿದೆ’ ಎಂದರು. “ಶೇಕಡವಾರು ಪದ್ದತಿಯ ಜೊತೆಗೆ ಎಲ್ಲ ಥಿಯೇಟರ್‌ಗಳು ಗಣಕೀಕೃತವಾಗಬೇಕು, ಮತ್ತು ಪ್ರೇಕ್ಷಕರಿಗೆ ಥಿಯೇಟರ್‌ಗಳಲ್ಲಿ ಅಗತ್ಯ ಮೂಲ ಸೌರ್ಯಗಳು ಸಿಗುವಂತಾಗಬೇಕು, ಪ್ರದರ್ಶಕರು, ವಿತರಕರು ಮತ್ತು ನಿರ್ಮಾಪಕರ ನಡುವೆ ಪಾರದರ್ಶಕ ವ್ಯವಹಾರ ನಡೆಯುವಂತಾಗಬೇಕು.

ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ, ಒಳಿತಿಗಾಗಿ ಎಲ್ಲರ ಇಂಥ ದ್ದೊಂದು ಬದಲಾವಣೆ ಆಗಬೇಕಾಗಿದೆ. ಬಹುತೇಕ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಈ ಸೂತ್ರವನ್ನು ಒಪ್ಪಿಕೊಂಡಿದ್ದಾರೆ’ ಎಂಬುದು ಅವರ ಮಾತು. ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಎಂ.ಜಿ ರಾಮಮೂರ್ತಿ, ಗೌರವ ಕಾರ್ಯದರ್ಶಿ ಕೆ. ಮಂಜು, ಜಂಟಿ ಕಾರ್ಯದರ್ಶಿ ರಮೇಶ್‌ ಯಾದವ್‌, ಖಜಾಂಚಿ ಆರ್‌.ಎಸ್‌ ಗೌಡ, ನಿರ್ಮಾಪಕ ಕರಿಸುಬ್ಬು, ಪ್ರದರ್ಶಕರಾದ ನರಸಿಂಹಲು ಸೇರಿದಂತೆ ಅನೇಕ ನಿರ್ಮಾಪಕರು, ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next