Advertisement

ಹಿಂದುತ್ವ ಉಳಿಸಲು 5 ಮಕ್ಕಳನ್ನು ಪಡೆಯಿರಿ : ಬಿಜೆಪಿ ಶಾಸಕನ ಸಲಹೆ!!

10:49 AM Jul 26, 2018 | Team Udayavani |

ಬಲ್ಲಿಯಾ (ಬಿಹಾರ ): ಹಿಂದೂ ದಂಪತಿಗಳು ಹಿಂದುತ್ವವನ್ನು ಉಳಿಸಿಕೊಳ್ಳಲು ಕನಿಷ್ಠ 5 ಮಕ್ಕಳನ್ನಾದರೂ ಪಡೆಯಬೇಕು ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಸಲಹೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 

Advertisement

ಸದಾ  ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುವ ಸಿಂಗ್‌ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ ಹಿಂದುಗಳು ಜನಸಂಖ್ಯೆ ಹೆಚ್ಚಿಸುವ ಅನಿವಾರ್ಯತೆ ಈಗ ಎದುರಾಗಿದೆ ಎಂದರು. 

ಕಳೆದ ತಿಂಗಳಿನಲ್ಲಿ ಶ್ರೀರಾಮ ಚಂದ್ರ ಬಂದರೂ ಅತ್ಯಾಚಾರಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next