Advertisement

ಸ್ಟೀಲರ್ ಪಂಚ್‌ಗೆ ತತ್ತರಿಸಿದ ಯುಪಿ

12:21 AM Aug 15, 2019 | Team Udayavani |

ಅಹ್ಮದಾಬಾದ್‌: ಬೆಂಗಳೂರು ಬುಲ್ಸ್‌ ವಿರುದ್ಧ ಭರ್ಜರಿ ಗೆಲುವು ಗಳಿಸಿ ಲಯ ಕಂಡಿಕೊಂಡಿದ್ದ ಯುಪಿ ಯೋಧಾ ತಂಡ ಹರ್ಯಾಣ ಸ್ಟೀಲರ್ ವಿರುದ್ಧದ ಪಂದ್ಯದಲ್ಲಿ 36-33 ಅಂತರದ ಸೋಲನುಭವಿಸಿದೆ.

Advertisement

ಪ್ರೊ ಕಬಡ್ಡಿ ಏಳನೇ ಆವೃತ್ತಿ ಅಹ್ಮದಾಬಾದ್‌ ಚರಣದ ಬುಧವಾರದ ಮೊದಲ ಪಂದ್ಯದಲ್ಲಿ ವಿಕಾಸ್‌ ಕಾಂಡೋಲ ಪ್ರಚಂಡ ರೈಡಿಂಗ್‌ ಹಾಗೂ ಸುನೀಲ್‌ ಆಕರ್ಷಕ ಟ್ಯಾಕಲ್‌ ನಡೆಸುವ ಮೂಲಕ ಹರ್ಯಾಣಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ವಿಕಾಸ್‌ ರೈಡಿಂಗ್‌ನಲ್ಲಿ ಅಬ್ಬರಿಸಿ ಒಟ್ಟು 12 ಅಂಕ ಗಳಿಸಿದರೆ, ಸುನೀಲ್‌ ಟ್ಯಾಕಲ್‌ನಿಂದ 6 ಅಂಕ ಗಳಿಸಿ ತಂಡದ ಗೆಲುವಿನ ರೂವಾರಿಗಳಾದರು. ಉಳಿದಂತೆ ಕರ್ನಾಟಕದ ಅನುಭವಿ ಆಟಗಾರ ಪ್ರಶಾಂತ್‌ ಕುಮಾರ್‌ ರೈ (3 ಅಂಕ) ತಂಡವನ್ನು ಆಧರಿಸಿದರು. ಆದರೆ ಹರ್ಯಾಣದ ಅನುಭವಿ ಆಟಗಾರ ಧರ್ಮರಾಜ್‌ ಚೆರಾÉಥನ್‌ ಕಳಪೆ ಆಟ ಮತ್ತೆ ಮುಂದುವರಿಸಿ ನಿರಾಸೆ ಮೂಡಿಸಿದರು.

ಯುಪಿ ಯೋಧಾ ಸೋಲಿನ ಸರಣಿ ಮುಂದುವರಿದಿದೆ. ಶ್ರೀಕಾಂತ್‌ ಜಾಧವ್‌ (9 ಅಂಕ), ಮೋನು ಗೋಯತ್‌ (5 ಅಂಕ), ಸುಮಿತ್‌ (4 ಅಂಕ) ಮಿಂಚಿದರೂ ತಂಡದ ಸೋಲು ತಪ್ಪಲಿಲ್ಲ. ಇದು 8 ಪಂದ್ಯಗಳಲ್ಲಿ ಯೋಧಾ ಅನುಭವಿಸಿದ 4ನೇ ಸೋಲು.

ಗುಜರಾತ್‌ಗೆ ಮತ್ತೆ ಸೋಲು
ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಮತ್ತೂಂದು ಸೋಲನುಭವಿಸಿತು. ಬೆಂಗಾಲ್‌ ವಾರಿ ಯರ್ ಈ ಮುಖಾಮುಖೀಯನ್ನು 28-26 ಅಂತರದಿಂದ ತನ್ನದಾಗಿಸಿ ಕೊಂಡಿತು. ಇದರೊಂದಿಗೆ ಗುಜರಾತ್‌ ಮನೆಯಂಗಳದಲ್ಲಿ ಹ್ಯಾಟ್ರಿಕ್‌ ಸೋಲಿನ ಅವಮಾನಕ್ಕೆ ಸಿಲುಕಿತು.

Advertisement

Udayavani is now on Telegram. Click here to join our channel and stay updated with the latest news.

Next