Advertisement

ಪ್ರೊ ಕಬಡ್ಡಿಗೆ ದೇಶಾದ್ಯಂತ ಪ್ರತಿಭಾ ಶೋಧ ಕಾರ್ಯ

06:20 AM Feb 27, 2018 | Team Udayavani |

ಮುಂಬೈ: ಕಳೆದ ವರ್ಷದಂತೆ ಈ ವರ್ಷವೂ ಪ್ರೊ ಕಬಡ್ಡಿ ಲೀಗ್‌ ಸಂಘಟಕರು ಹಾಗೂ ಅಖೀಲ ಭಾರತ ಕಬಡ್ಡಿ ಒಕ್ಕೂಟ ಸೇರಿಕೊಂಡು ಪ್ರತಿಭಾ ಶೋಧ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ. ಸೋಮವಾರ ಈ ಕಾರ್ಯಕ್ರಮ ದೇಶದ 18 ನಗರಗಳಲ್ಲಿ ನಡೆದಿದೆ. 

Advertisement

ಇದರಲ್ಲಿ ಬೆಂಗಳೂರು ಕೂಡ ಸೇರಿದೆ. ಆಯ್ದ ಆಟಗಾರರಿಗೆ ಪ್ರೊ ಕಬಡ್ಡಿ ಬಾಗಿಲು ತೆರೆಯಲಿದೆ. ಈ ವರ್ಷ 4 ನಗರಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಾಗಿದೆ. ಇವುಗಳೆಂದರೆ ಇಂಫಾಲ, ತ್ರಿಶ್ಯೂರ್‌, ಭುವನೇಶ್ವರ, ಅಹ್ಮದಾಬಾದ್‌ ಮತ್ತು ಪಾಟ್ನಾ. ಪ್ರತಿ ನಗರದಲ್ಲಿ 2ರಿಂದ 3 ದಿನಗಳ ಕಾಲ ಭವಿಷ್ಯದ ಕಬಡ್ಡಿ ತಾರೆಗಳನ್ನು ಗುರುತಿಸಲಿದ್ದಾರೆ. ಕಳೆದ ವರ್ಷ ಒಟ್ಟು 4,600 ಮಂದಿ ಆಟಗಾರರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ 133 ಆಟಗಾರರು ಹರಾಜು ಪ್ರಕ್ರಿಯೆಗೆ ಲಭ್ಯರಾಗಿದ್ದರು. ಈ ಪ್ರತಿಭಾ ಶೋಧ ಕಾರ್ಯಕ್ರಮವನ್ನು ಭಾರತ ತಂಡದ ಮಾಜಿ ನಾಯಕ ಅನೂಪ್‌ ಕುಮಾರ್‌ ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next