Advertisement

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

09:58 AM May 02, 2024 | Team Udayavani |

ಗುವಾಹಾಟಿ: ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಭೂ ಅಕ್ರಮ, ಮರಳು ದಂಧೆ, ಕಲ್ಲಿದ್ದಲು ಅಕ್ರಮ ಗಣಿಗಾರಿಕೆ, ಸುಪಾರಿ ಸೇರಿದಂತೆ ಎಲ್ಲ ರೀತಿಯ ಮಾಫಿಯಾಗಳು ನಡೆಯುತ್ತಿವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆರೋಪಿಸಿದ್ದಾರೆ.

Advertisement

ದುಬ್ರಿ ಜಿಲ್ಲೆಯ ಬಲಜನ್‌ನಲ್ಲಿ ಮಾತನಾಡಿದ ಅವರು, ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಎಐಯುಡಿಎಫ್ ನಾಯಕ ಬದ್ರುದ್ದೀನ್‌ ಅಜ್ಮಲ್‌ ಜತೆಗೆ ರಹಸ್ಯ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್‌ ಅನ್ನು ಸೋಲಿಸಲು ಸಂಚು ರೂಪಿಸಿದ್ದಾರೆ. ಸಿಎಂ ಹಿಮಾಂತ ವಿರುದ್ಧವೇ ಹಲವು ಗುರುತರ ಆರೋಪಗಳು ಕೇಳಿ ಬಂದಿವೆ ಎಂದು ದೂರಿದರು.

ಪ್ರಜ್ವಲ್‌ ಪ್ರಕರಣ ಪ್ರಸ್ತಾವ: ಇದೇ ವೇಳೆ ಕರ್ನಾಟಕದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬಗ್ಗೆ ಕೇಳಿಬಂದಿರುವ ಆರೋಪಗಳನ್ನೂ ಉಲ್ಲೇಖೀಸಿ ವಾಗ್ಧಾಳಿ ನಡೆಸಿದ್ದಾರೆ. ಲೈಂಗಿಕ ಹಗರಣದ ಆರೋಪ ಹೊತ್ತ ವ್ಯಕ್ತಿಯ ಜತೆಗೆ ಮೋದಿ ವೇದಿಕೆ ಹಂಚಿಕೊಳ್ಳುತ್ತಾರೆ. ಆತ ದೇಶ ತೊರೆದು ಹೋದರೂ ಅದನ್ನು ತಡೆಯಲು ಮೋದಿ ಮತ್ತು ಅಮಿತ್‌ ಶಾಗೆ ಸಾಧ್ಯವಾಗಲಿಲ್ಲ. ಮಹಿಳೆಯರಿಗೆ ಇವರು ನೀಡುವ ಸುರಕ್ಷತೆ ಇದೇ ಏನು ವ್ಯಂಗ್ಯವಾಗಿ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next