Advertisement

ಪ್ರಿಯಾಂಕ ಆಗಮನ ಕಾಂಗ್ರೆಸ್‌ಗೆ ಆನೆ ಬಲ

07:32 AM Jan 26, 2019 | |

ಚಿಕ್ಕಬಳ್ಳಾಪುರ: ಪ್ರಿಯಾಂಕಾ ಗಾಂಧಿ ಅವರು ರಾಜಕೀಯ ಪ್ರವೇಶದಿಂದ ರಾಹುಲ್‌ ಗಾಂಧಿಗೆ ಮತ್ತಷ್ಟು ಶಕ್ತಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ನೂರಾನೆ ಬಲ ಬಂದಿದೆ. ಬಿಜೆಪಿಗೆ ಒಬ್ಬರೇ ಮೋದಿ ಇದ್ದರೆ, ಕಾಂಗ್ರೆಸ್‌ಗೆ ರಾಹುಲ್‌ ಗಾಂಧಿ ಜೊತೆ ಪ್ರಿಯಾಂಕ ಗಾಂಧಿ ಇದ್ದಾರೆ ಎಂದು ಎಂದು ಸಂಸದ ವೀರಪ್ಪ ಮೊಯ್ಲಿ ಹೇಳಿದರು.

Advertisement

ನಗರದ ಹೊರ ವಲಯದ ಕಂದ ವಾರ ಕೆರೆಯಲ್ಲಿ ಹೆಬ್ಟಾಳ, ನಾಗವಾರ ನೀರಾವರಿ ಯೋಜನೆ ವ್ಯಾಪ್ತಿಗೆ ಬರುವ ಕೆರೆಗಳ ಅಭಿವೃದ್ಧಿಗೆ ಚಾಲನೆ ನೀಡಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ದಿನದಿಂದ ದಿನಕ್ಕೆ ಮೋದಿ ಅಲೆ ಮಾಯವಾಗುತ್ತಿದೆ ಎಂದರು.

ಸೀಟು ಹೊಂದಾಣಿ ಆಗಿಲ್ಲ: ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್‌ ಬೇಡಿಕೆ ಇಟ್ಟಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಎರಡು ಪಕ್ಷಗಳ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಸದ್ಯದಲೇ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ಹಾಲಿ ಕಾಂಗ್ರೆಸ್‌ ಸಂಸದರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಪ್ರಶ್ನೆ ಇಲ್ಲ ಎಂದರು.

ಯಡಿಯೂರಪ್ಪಗೆ ಈಗ ಬರ ನೆನಪಾಯಿತಾ? ರಾಜ್ಯದಲ್ಲಿ ಯಡಿ ಯೂರಪ್ಪ ನೇತೃತ್ವದಲ್ಲಿ ಬಿಜೆಪಿ 20 ಸೀಟು ಅಲ್ಲ 5 ಸೀಟ್ ಗೆದ್ದರೆ ಹೆಚ್ಚು. ಗುರಗಾಂವ್‌ ನಲ್ಲಿ ಯಡಿಯೂರಪ್ಪ, ಐಷಾರಾಮಿ ಜೀವನ ಮಾಡಿ ಶಾಸಕ ರೊಂದಿಗೆ ಮೋಜು, ಮಸ್ತಿ ನಡೆಸಿ ಈಗ ಬರ ಅಧ್ಯಯನಕ್ಕೆ ಬಂದಿದ್ದಾರೆ ಎಂದು ದೂರಿದರು. ಶಾಸಕ ಡಾ.ಕೆ.ಸುಧಾಕರ್‌, ಜಿಪಂ ಸದಸ್ಯ ಕೇಶವರೆಡ್ಡಿ, ಕೋಚಿ ಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌, ನಗರಸಭೆ ಮಾಜಿ ಅಧ್ಯಕ್ಷ ಪೆರಿಕಲ್‌ ಮಂಜು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next