Advertisement

ಮೋದಿ ಎದುರು ಪ್ರಿಯಾಂಕ್‌ ತೃಣಕ್ಕೆ ಸಮಾನ: ಸೋಮಣ್ಣ

11:18 PM May 17, 2019 | Team Udayavani |

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ್‌ ಖರ್ಗೆಯವರ ನಡವಳಿಕೆ ಸರಿಯಿಲ್ಲ. ಪ್ರಧಾನಿ ಮೋದಿ ನನ್ನ ಪಾದ ತೊಳೆಯಲಿ ಎಂಬ ಹೇಳಿಕೆ ನೀಡುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಮೋದಿ ಎದುರು ಪ್ರಿಯಾಂಕ್‌ ಖರ್ಗೆ ತೃಣಕ್ಕೆ ಸಮಾನ ಎಂದು ಮಾಜಿ ಸಚಿವ ವಿ.ಸೋಮಣ್ಣ ವಾಗ್ಧಾಳಿ ನಡೆಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್‌ ಖರ್ಗೆಯವರು ಮೋದಿ ಬಗ್ಗೆ ಮಾತನಾಡಿ ತಮ್ಮ ಬಾಯಿ ಚಪಲ ತೀರಿಸಿಕೊಂಡಿದ್ದಾರೆ. ಕಾಂಗ್ರೆಸ್‌ನವರದ್ದು ಹಣದ ಮಂತ್ರವಾದರೆ, ನಮ್ಮದು ಅಭಿವೃದ್ಧಿ ಮಂತ್ರ. ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಜನರ ಹಾದಿ ತಪ್ಪಿಸುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ದೂರದೃಷ್ಟಿಯಿರುವ ನಾಯಕ. ಆದರೆ ಮಗನನ್ನು ನಿಯಂತ್ರಿಸಲು ಆಗುತ್ತಿಲ್ಲ. ಪ್ರಿಯಾಂಕ್‌ ಖರ್ಗೆಗೆ ಜನರೇ ಬುದ್ಧಿ ಕಲಿಸುತ್ತಾರೆ. ಹಣದ ಹೊಳೆ ಹರಿಸಿದರೂ ಚಿಂಚೋಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹೀನಾಯವಾಗಿ ಸೋಲು ಅನುಭವಿಸುತ್ತಾರೆ. ರಾಜ್ಯ ರಾಜಕಾರಣದಲ್ಲಿ ಸದ್ಯದಲ್ಲಿಯೇ ಧೃವೀಕರಣ ಆರಂಭವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next