Advertisement

ಮುಷ್ಕರಕ್ಕೆ ಖಾಸಗಿ ವೈದ್ಯರ ಬೆಂಬಲ; ತುರ್ತು ಸೇವೆಗೆ ಅಡ್ಡಿಯಿಲ್ಲ 

01:07 PM Jul 29, 2018 | |

ಬೆಳ್ತಂಗಡಿ : ಕೇಂದ್ರ ಸರಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ ಎಂಸಿ) ವಿರೋಧಿಸಿ ಖಾಸಗಿ ವೈದ್ಯರು ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಬೆಳ್ತಂಗಡಿ ತಾಲೂಕಿನ ವೈದ್ಯರು ಬೆಂಬಲ ಸೂಚಿಸಿದ್ದು, ಆದರೆ ರೋಗಿಗಳ ತುರ್ತು ಸೇವೆಗಳಿಗೆ ತೊಂದರೆಯಾಗದಂತೆ ಮುಷ್ಕರ ನಡೆಸಿದ್ದಾರೆ. ತಾಲೂಕಿನ ಬಹುತೇಕ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಧಿಕ್ಕಾರ ದಿನ ಎಂದು ಫಲಕ ಅಳವಡಿಸಿ, ಹೊರ ರೋಗಿ ವಿಭಾಗವನ್ನು ಬಂದ್‌ ಮಾಡಿದ್ದರು. ಆದರೆ ಆಸ್ಪತ್ರೆಗಳಿಗೆ ಆಗಮಿಸಿದ ಗಂಭೀರ ಪ್ರಕರಣಗಳಿಗೆ ಸೇವೆ ನೀಡಲಾಗಿತ್ತು.

Advertisement

ಕೇವಲ ತಮ್ಮ ಸಂಸ್ಥೆಗಳಲ್ಲಿ ಬೋರ್ಡ್‌ ಹಾಕಲಾಗಿತ್ತೇ ವಿನಾ ಯಾವುದೇ ಪ್ರತಿಭಟನೆ ಇರಲಿಲ್ಲ. ಜತೆಗೆ ಬಹುತೇಕ ಕ್ಲಿನಿಕ್‌ಗಳು ತೆರೆದುಕೊಂಡಿದ್ದವು. ತಾಲೂಕಿನಲ್ಲಿ ನಾನು ಮುಷ್ಕರವನ್ನು ಬೆಂಬಲಿಸುವ ಜತೆಗೆ ರೋಗಿಗಳ ಹಿತದೃಷ್ಟಿಯಿಂದ ತುರ್ತು ಸೇವೆಗಳನ್ನು ನೀಡಿದ್ದೇವೆ ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಗೋಪಾಲಕೃಷ್ಣ ಕೆ. ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next