Advertisement

ಕಾಡುಗೊಲ್ಲ ಸಮುದಾಯ ಎಸ್‌ಟಿಗೆ ಸೇರಿಸುವ ಪ್ರಸ್ತಾವನೆಗೆ ಆದ್ಯತೆ: ಸಚಿವ ಅರ್ಜುನ್‌ ಮುಂಡಾ

11:50 PM Jan 07, 2024 | Team Udayavani |

ಬೆಂಗಳೂರು: ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡ ಪ್ರವರ್ಗಕ್ಕೆ ಸೇರಿಸುವ ಪ್ರಸ್ತಾವನೆಗೆ ವಿಶೇಷ ಆದ್ಯತೆ ನೀಡಿ ಪರಾಮರ್ಶೆ ನಡೆಸ ಲಾಗುತ್ತಿದೆ ಎಂದು ಕೃಷಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ ಭರವಸೆ ನೀಡಿದ್ದಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಮುಂಡಾ ಅವರು ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರನ್ನು ಅವರ ನಿವಾಸ ದಲ್ಲಿ ಸೌಹಾರ್ದ ಭೇಟಿಯಾದ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಮಾರಸ್ವಾಮಿ ಅವರು ಬಳಿಕ ಮಾಧ್ಯಮಗಳ ಜತೆ ಮಾಹಿತಿ ಹಂಚಿಕೊಂಡರು.

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ತಾವು ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಿರುವುದನ್ನು ದೇವೇಗೌಡರು ಪ್ರಸ್ತಾವಿಸಿ ದ್ದಾರೆ. ಪ್ರಧಾನಿಗಳು ಆ ಪತ್ರವನ್ನು ಬುಡಕಟ್ಟು ಸಚಿವಾಲಯಕ್ಕೆ ರವಾನಿಸಿದ್ದು, ಪರಾಮರ್ಶೆ ನಡೆಯುತ್ತಿದೆ ಎಂದು ಅರ್ಜುನ್‌ ಮುಂಡಾ ತಿಳಿಸಿರುವುದಾಗಿ ಕುಮಾರಸ್ವಾಮಿ ಹೇಳಿದರು. ರಾಜ್ಯದ ರೈತರ ಸಂಕಷ್ಟದ ಬಗ್ಗೆಯೂ ಕೃಷಿ ಸಚಿವರಿಗೆ ವಿವರಿಸಲಾಯಿತು. ಕೊಬ್ಬರಿಯ ಬೆಂಬಲ ಬೆಲೆಯನ್ನು ಇನ್ನಷ್ಟು ಏರಿಸುವಂತೆಯೂ ಸಚಿವರನ್ನು ಕೋರಿದೆವು. ಈ ಹಿನ್ನೆಲೆಯಲ್ಲಿ ಜ. 15-16ಕ್ಕೆ ದಿಲ್ಲಿಗೆ ಬರುವಂತೆ ಸಚಿವರು ತಿಳಿಸಿರುವುದಾಗಿ ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next