Advertisement

ಖಾದ್ಯ ತೈಲ ಕ್ಷೇತ್ರದಲ್ಲೂ ದೇಶ ಸ್ವಾವಲಂಬಿಯಾಗಬೇಕು : ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ

08:13 PM Aug 09, 2021 | Team Udayavani |

ನವದೆಹಲಿ : ಅಕ್ಕಿ, ಗೋಧಿ, ಸಕ್ಕರೆಯಲ್ಲಿ ಸ್ವಾವಲಂಬಿಯಾಗಿರುವ ದೇಶ, ಖಾದ್ಯ ತೈಲ ಉತ್ಪಾದನೆಯಲ್ಲೂ ಇತರ ದೇಶಗಳನ್ನು ಅವಲಂಬಿಸುವಂತೆ ಇರಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅದಕ್ಕಾಗಿ ರಾಷ್ಟ್ರೀಯ ಖಾದ್ಯ ತೈಲ ಮಿಷನ್‌- ತಾಳೆ ಎಣ್ಣೆ (ಎನ್‌ಎಂಇಒ-ಒಪಿ) ಎಂಬ ಹೊಸ ಯೋಜನೆಯನ್ನೂ ಅನುಷ್ಠಾನಗೊಳಿಸಲಾಗುತ್ತದೆ. ಅದಕ್ಕಾಗಿ 11 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಅನ್ವಯ 9ನೇ ಕಂತಿನಲ್ಲಿ 9.75 ಕೋಟಿ ರೈತರಿಗೆ 19,500 ಕೋಟಿ ರೂ. ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿ, ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ. ಇದುವರೆಗೆ ಒಟ್ಟು 1.57 ಲಕ್ಷ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ರೈತರಿಗೆ ಪಿಎಂ-ಕಿಸಾನ್‌ ಯೋಜನೆಯಡಿ ನೀಡಿದಂತಾಗಿದೆ. ಸುಮಾರು ಹತ್ತು ಕೋಟಿ ರೈತರಿಗೆ ಯೋಜನೆಯಿಂದ ನೆರವಾಗಿದೆ. ಕೊರೊನಾ ಸೋಂಕಿನ ಅವಧಿಯಲ್ಲಿ ಸಣ್ಣ ರೈತರಿಗೆ 1 ಲಕ್ಷ ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜೇನು ಕೃಷಿಗೆ ಸಂಬಂಧಿಸಿದಂತೆ ಜಾರಿ ಮಾಡಲಾಗಿರುವ ಹನಿ ಬೀ ಯೋಜನೆಯಿಂದಲೂ ರೈತರಿಗೆ ಅನುಕೂಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಸರಿ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ನಾಫೆಡ್‌ನ‌ ಮಳಿಗೆಗಳ ಮೂಲಕ ಅದನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ :ರಾಜ್ಯದಲ್ಲಿ ತಗ್ಗಿದ ಕೋವಿಡ್ : ಇಂದು 1186 ಪ್ರಕರಣ ಪತ್ತೆ| 24 ಜನರ ಸಾವು

ದೂರು ದಾಖಲಿಸಲು ಸಹಾಯವಾಣಿ:
ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಅನ್ವಯ ಖಾತೆಗೆ ವಿಮೆಯ ನೆರವಿನ ಮೊತ್ತ ಜಮೆಯಾಗದಿದ್ದರೆ ದೂರು ದಾಖಲಿಸಲು ಸಹಾಯವಾಣಿಯನ್ನೂ ಬಿಡುಗಡೆ ಮಾಡಿದೆ. 011 24300606 ಅಥವಾ ಟೋಲ್‌ ಫ್ರೀ ನಂಬರ್‌- 18001155266ಕ್ಕೆ ಫೋನ್‌ ಮಾಡಿ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಇದೆ.

Advertisement

Udayavani is now on Telegram. Click here to join our channel and stay updated with the latest news.

Next