Advertisement

Ayodhya: ಜ.14ರಿಂದ ಮಂದಿರ ಪ್ರಾಣ ಪ್ರತಿಷ್ಠೆ- 24ರಂದು ಪ್ರಧಾನಿ ಮೋದಿ ಭಾಗಿ

09:08 PM Jun 20, 2023 | Team Udayavani |

ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಪ್ರಾಣಪ್ರತಿಷ್ಠೆ ಕಾರ್ಯಕ್ರಮ 2024ರ ಜ.14ರ ಮಕರ ಸಂಕ್ರಾಂತಿಯಿಂದ 24ರ ವರೆಗೆ ನಡೆಯಲಿದೆ. ಕೊನೆಯ ದಿನ ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ. ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ನಡೆಯಲಿವೆ. ದೇಶ-ವಿದೇಶಗಳಲ್ಲಿ ಇರುವ ಭಕ್ತರು ಅದನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Advertisement

ಪ್ರಸಕ್ತ ವರ್ಷದ ಬೆಳಕಿನ ಹಬ್ಬ ದೀಪಾವಳಿ ವೇಳೆಗೆ ಅಂದರೆ ಅಕ್ಟೋಬರ್‌ ಅಂತ್ಯಕ್ಕೆ ದೇಗುಲದ ಮೊದಲ ಅಂತಸ್ತಿನ ಕೆಲಸ ಪೂರ್ಣಗೊಳ್ಳಲಿದೆ. ನಾಲ್ಕು ಅಂತಸ್ತುಗಳ ದೇಗುಲ ಸಮುತ್ಛಯ ಪೂರ್ಣಗೊಂಡ ಬಳಿಕ ಮೊದಲ ಅಂತಸ್ತನ್ನು “ರಾಮ ಕಥೆ’ ನಡೆಸಲು ಮೀಸಲಾಗಿ ಇರಿಸಲಾಗುತ್ತದೆ. ದೇಗುಲದ ಜೀವಿತಾವಧಿ ಬರೋಬ್ಬರಿ ಒಂದು ಸಾವಿರ ವರ್ಷ ಎಂದೂ ಮಿಶ್ರಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next