Advertisement

ಬೇಡಿಕೆ ಈಡೇರಿಕೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಆಗ್ರಹ

09:46 PM Oct 29, 2021 | Team Udayavani |

ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಸಹಕಾರ ಚಳವಳಿಗೆ ಮುಂದಾಗುವುದಾಗಿ ಎಚ್ಚರಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಡಿಡಿಪಿಐ ಅವರ ಮೂಲಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

Advertisement

ಬೆಳಗಾವಿ ಮತ್ತು ತುಮಕೂರಿನಲ್ಲಿ ನಡೆದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ಶಿಕ್ಷಕರ ಹಲವಾರು ಪ್ರಮುಖ ಬೇಡಿಕೆಗಳ ಈಡೇರಿಸಬೇಕು. ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವ \ಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಮುಖ್ಯ ಗುರುಗಳಿಗೆ 15, 20, 25, 30 ವರ್ಷಗಳ ವೇತನ ಬಡ್ತಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರ ಹಾಗೂ ಹಿಂದಿ ಶಿಕ್ಷಕರ ಸಮಸ್ಯೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ವರ್ಷಗಳಿಂದ ಪ್ರತಿಭಟನೆ, ಹೋರಾಟ ನಡೆಸುತ್ತಿದ್ದರೂ ಸರಕಾರ ನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ವಿಶೇಷವಾಗಿ ಶಿಕ್ಷಕರ ಸಂಘಟನೆ ಮಕ್ಕಳೊಂದಿಗಿದ್ದು, ಬೇಡಿಕೆ ಈಡೇರಿಕೆಗಾಗಿ ಅಸಹಕಾರ ಚಳುವಳಿಯ ಮೂಲಕ ಸರಕಾರದ ಗಮನ ಸೆಳೆಯುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರನ್ವಯ ತರಬೇತಿ ಬಹಿಷ್ಕಾರ, ಸಮಾಲೋಚನಾ ಸಭೆ, ಗೂಗಲ್‌ ಫಾರ್ಮ್ ತುಂಬದೇ ಕಪ್ಪು ಬಟ್ಟೆ ಧರಿಸಿ ಶೆ„ಕ್ಷಣಿಕ ಚಟುವಟಿಕೆ ನಿರ್ವಹಿಸಲಾಗುವದು ಆದಾಗ್ಯೂ ಶಿಕ್ಷಣ ಇಲಾಖೆ ಸ್ಪಂದಿಸದಿದ್ದರೆ ಅಸಹಕಾರ ಚಳುವಳಿಯನ್ನು ತೀವ್ರಗೊಳಿಸಿ, ಮಧ್ಯಾನ್ಹದ ಬಿಸಿಯೂಟದ ಮಾಹಿತಿಯನ್ನು ಅಪ್‌ಡೇಟ್‌ ಮಾಡದೇ, ನವೆಂಬರ್‌ 11 ರಿಂದ 18ರವರೆಗೆ ಎಸ್‌ಎಟಿಎಸ್‌ ಮಾಹಿತಿಯನ್ನು ಅಪ್‌ಡೇಟ್‌ ಮಾಡದೇ ಹೋರಾಟ ನಡೆಸಲಾಗುವುದು. ಮುಂದೆ ತರಗತಿ ಬಹಿಷ್ಕಾರ ಹಾಗೂ ಶಾಲಾ ಬಹಿಷ್ಕಾರದಂತಹ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸಂಘದ ಗೌರವ ಅಧ್ಯಕ್ಷ ಎಸ್‌.ಎಂ.ಪಾಟೀಲ, ಕಾರ್ಯಾಧ್ಯಕ್ಷ ಪಿ.ಈರಪ್ಪ, ಉಪಾಧ್ಯಕ್ಷ ಎಂ.ವೈ.ಚಕ್ರಪಾಣಿ, ಜಿ.ಎನ್‌.ಕ್ಯಾತನಗೌಡ್ರ, ಕೋಶಾಧ್ಯಕ್ಷ ಎ.ಕೆ.ವಂಟಿ, ಸಹಕಾರ್ಯದರ್ಶಿ ಎಂ.ಪಿ.ಮೆಣಸಿನಕಾಯಿ, ಎಂ.ಎಚ್‌. ತೊಂಡಿಹಾಳ, ಸಂಘಟನಾ ಕಾರ್ಯದರ್ಶಿ ಮುತ್ತು ಮಾದರ, ಜಿ.ಜಿ.ಹರ್ತಿ, ಎಸ್‌ .ವಿ.ಕುಲಕರ್ಣಿ, ಸಿ.ಎಫ್‌.ಅಗಸಿಮನಿ, ಪ್ರಕಾಶ ಅಂಬೂರೆ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಗುಂಜಿಕರ, ಪ್ರಧಾನ ಕಾರ್ಯದರ್ಶಿ ಕೆ.ಎಫ್‌.ಹಳ್ಯಾಳ, ವಿವಿದ ಘಟಕಗಳ ಪದಾ  ಧಿಕಾರಿಗಳಾದ ಎಸ್‌.ಆರ್‌.ಬಂಡಿ, ಎಸ್‌. ಕೆ.ಮಂಗಳಗುಡ್ಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next