Advertisement

ಒಂದೆಡೆ ಪ್ರತಿಭಟನೆ; ಬಾಲಾಜಿ ವೆಂಕಟೇಶ್ವರ ದೇವರಿಗೂ ಪೌರತ್ವ ಕೊಡಿ: ಪುರೋಹಿತ ರಂಗರಾಜನ್

09:57 AM Jan 24, 2020 | Nagendra Trasi |

ಹೈದರಾಬಾದ್: ಇಡೀ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಚರ್ಚೆ, ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಚಿಲ್ಕುರ್ ಬಾಲಾಜಿ ದೇವಸ್ಥಾನದ ಮುಖ್ಯ ಪುರೋಹಿತ ಸಿಎಸ್ ರಂಗರಾಜನ್ ಅವರು, ತಮ್ಮ ದೇವಾಲಯದ ದೇವರಿಗೆ ಪೌರತ್ವ ಕೊಡುವಂತೆ ಒತ್ತಾಯಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

Advertisement

ಪ್ರಸಿದ್ಧ ಚಿಲ್ಕುರ್ ದೇವಾಲಯದ ಬಾಲಾಜಿ ವೆಂಕಟೇಶ್ವರ ದೇವರಿಗೆ ಪೌರತ್ವ ನೀಡಬೇಕೆಂದು ರಂಗರಾಜನ್ ತಿಳಿಸಿದ್ದಾರೆ. ಎಲ್ಲಾ ದೇವರುಗಳನ್ನು ಅಪ್ರಾಪ್ತ ಎಂದೇ ಪರಿಗಣಿಸಲಾಗುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಕಲಂ 5(4)ರ ಪ್ರಕಾರ ಅಪ್ರಾಪ್ತರಿಗೂ ಪೌರತ್ವ ಹಕ್ಕನ್ನು ನೀಡಬೇಕು ಎಂದು ತಿಳಿಸಿದೆ. ಹೀಗಾಗಿ ಈ ಕಲಂ ಪ್ರಕಾರ ಎಲ್ಲಾ ದೇವಾಲಯಗಳಲ್ಲಿರುವ ದೇವರುಗಳಿಗೆ ಪೌರತ್ವ ಹಕ್ಕನ್ನು ನೀಡಬೇಕು ಎಂದು ತಿಳಿಸಿದ್ದಾರೆ.

ಎಲ್ಲಾ ಹಿಂದೂ ದೇವರುಗಳನ್ನು ವೆಂಕಟೇಶ್ವರ ಸ್ವಾಮಿ ತಿರುಮಲ, ಅಯ್ಯಪ್ಪ ಸ್ವಾಮಿ ಶಬರಿಮಲೆ ಹಾಗೂ ಪದ್ಮನಾಭಸ್ವಾಮಿ ಕೇರಳ ಎಂಬ ರೀತಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕಲಂ 5(4)ರ ಪ್ರಕಾರ ನೋಂದಾಯಿಸುವಂತೆ ರಂಗರಾಜನ್ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next