Advertisement

Theerthahalli: ಪತ್ರಿಕಾ ವರದಿಗಾರ, ವಿತರಕರಾಗಿದ್ದ ರಾಮಕೃಷ್ಣ ನಿಧನ

11:21 AM Oct 13, 2023 | Team Udayavani |

ತೀರ್ಥಹಳ್ಳಿ : ಪಟ್ಟಣದಲ್ಲಿ ಪ್ರತಿ ಮನೆ ಮನೆಗೂ ನಿತ್ಯ ಬೆಳಗಿನ ಪತ್ರಿಕೆಗಳನ್ನು ತಲುಪಿಸಿ ಮನೆ ಮಾತಾಗಿದ್ದ ವರದಿಗಾರರು ಹಾಗೂ ಪತ್ರಿಕಾ ವಿತರಕರಾಗಿದ್ದ ರಾಮಕೃಷ್ಣ (89 ವ) ವಯೋಸಹಜದಿಂದ ಆ.13ರ ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

Advertisement

ಪಟ್ಟಣದ ಕೆ.ಸಿ. ರಸ್ತೆಯ ನಿವಾಸಿಯಾಗಿದ್ದ ಇವರು ಹಲವಾರು ವರ್ಷಗಳಿಂದ ಕನ್ನಡ ಪ್ರಭ ಪತ್ರಿಕೆಯ ವರದಿಗಾರರಾಗಿ ಮತ್ತು ಹೊಸದಿಗಂತ ಪತ್ರಿಕೆಯ ವಿತರಕರಾಗಿ ಮನೆ ಮನೆಗೆ ತಲುಪಿಸುತ್ತಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಶುಕ್ರವಾರ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next