Advertisement

ರಾಷ್ಟ್ರಪತಿ ಆಯ್ಕೆ:ಮಾತುಕತೆ ನಿಗೂಢ, ಪ್ರತಿಪಕ್ಷಗಳ ಜತೆ ಬಿಜೆಪಿ ಚರ್ಚೆ

10:14 AM Jun 17, 2017 | Team Udayavani |

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ‘ಸರ್ವಸಮ್ಮತ’ ಅಭ್ಯರ್ಥಿ ಆಯ್ಕೆಗೆ ಕಸರತ್ತು ಶುರುವಾಗಿದ್ದು, ಬಿಜೆಪಿ ನಾಯಕರು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿಪಿಎಂನ ಸೀತಾರಾಂ ಯೆಚೂರಿ, ಶಿವಸೇನೆಯ ಉದ್ಧವ್‌ ಠಾಕ್ರೆ, ಎನ್‌ಸಿಪಿ ಮತ್ತು ಬಿಎಸ್‌ಪಿ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದರು. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ ಮತ್ತು ವೆಂಕಯ್ಯ ನಾಯ್ಡು ಮೊದಲಿಗೆ ಸೋನಿಯಾ ಜತೆ ಮಾತುಕತೆ ನಡೆಸಿದರು. ಆದರೆ ಈ ಸಂದರ್ಭ ಯಾವುದೇ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗಿಲ್ಲ ಎಂದು ಹೇಳಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಸಭೆಯಲ್ಲಿ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌ ತಮಗೆ ಯಾರ ಬಗ್ಗೆ ಒಲವಿದೆ ಎನ್ನುವುದನ್ನು ಹೇಳದೆ, ಯಾರ ಹೆಸರನ್ನೂ ಪ್ರಸ್ತಾವಿಸದೆ ಗುಟ್ಟು ಕಾಯ್ದುಕೊಂಡಿವೆ.

Advertisement

ಜನಪಥ್‌ ರಸ್ತೆಯಲ್ಲಿರುವ ನಂ. 10 ಗಾಂಧಿ ನಿವಾಸದಲ್ಲಿ ನಡೆದ ಸಭೆಯ ಬಳಿಕ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌, ‘ಬಿಜೆಪಿ ನಾಯಕರು ಕೆಲವರ ಹೆಸರು ಪ್ರಸ್ತಾವಿಸಿ ಮಾತನಾಡುತ್ತಾರೆಂದು ನಾವು ನಿರೀಕ್ಷಿಸಿದ್ದೆವು. ಆದರೆ ಯಾರ ಹೆಸರನ್ನೂ ಪ್ರಸ್ತಾವಿಸಿಲ್ಲ. ನಮ್ಮ ಬಳಿಯೇ ಅಭ್ಯರ್ಥಿ ಹೆಸರು ಕೇಳಿದ್ದು, ನಾವು ಯಾರ ಹೆಸರನ್ನೂ ಸೂಚಿಸಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಉಳಿದ ನಾಯಕರೊಂದಿಗೆ ಮಾತನಾಡಿ ನಿರ್ಧಾರ ಪ್ರಕಟಿಸಲಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next