Advertisement

ಕೋವಿಂದ್‌, ಮೀರಾ ಬಿಟ್ಟು ಬೇರೆಲ್ಲ ನಾಮಪತ್ರ ತಿರಸ್ಕೃತ

03:20 AM Jun 30, 2017 | Team Udayavani |

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್‌ ಅವರ ನಾಮಪತ್ರ ಹೊರತಾಗಿ ಬೇರೆಲ್ಲವೂ ತಿರಸ್ಕೃತಗೊಂಡಿವೆ. ಪ್ರಮುಖ ಸ್ಪರ್ಧಾಳುಗಳಾದ ಮೀರಾ, ಕೋವಿಂದ್‌ ಸೇರಿದಂತೆ ಸುಮಾರು 95 ಮಂದಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಬಯಸಿದ್ದರು. ಜೊತೆಗೆ ಇತರರೆೆಲ್ಲರಿಗೂ, ಬೇಕಾದಷ್ಟು ಪ್ರಮಾಣದ ಸೂಚಕರೂ ಇರಲಿಲ್ಲ. ಪರಿಶೀಲನೆ ವೇಳೆ ಇವೆಲ್ಲ ತಿರಸ್ಕೃತವಾಗಿವೆ ಎಂದು ಲೋಕಸಭೆ ಕಾರ್ಯಾಲಯದ ಮೂಲಗಳು ಹೇಳಿವೆ. ರಾಷ್ಟ್ರಪತಿ ಚುನಾವಣೆ ನಿಯಮಗಳ ಪ್ರಕಾರ ಅಭ್ಯರ್ಥಿಯೊಬ್ಬನಿಗೆ ಎಲೆಕ್ಟೋರಲ್‌ ಕಾಲೇಜಿನಲ್ಲಿ ಇರುವಂಥ ಕನಿಷ್ಠ 50 ಮಂದಿ ಸದಸ್ಯರು ಸೂಚಕರಾಗಿ ಸಹಿ ಹಾಕಬೇಕಾಗುತ್ತದೆ.

Advertisement

ಕೋವಿಂದ್‌ಗೆ ಐಎನ್‌ಎಲ್‌ಡಿ ಬೆಂಬಲ: ಇತ್ತ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್‌ ಅವರಿಗೆ ಹರ್ಯಾಣ ಪ್ರಮಖ ವಿಪಕ್ಷ ಐಎನ್‌ಎಲ್‌ಡಿ ಬೆಂಬಲ ಸೂಚಿಸಿದೆ. ಹರ್ಯಾಣ ಸಿಎಂ, ಬಿಜೆಪಿಯ ಮನೋಹರಲಾಲ್‌ ಖಟ್ಟರ್‌ ಅವರೊಂದಿಗಿನ ಸಭೆ ಬಳಿಕ ಐಎನ್‌ಎಲ್‌ಡಿ ಈ ನಿರ್ಧಾರ ತಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next