Advertisement

ಆರೋಗ್ಯ ಕಾರ್ಯಕರ್ತರಿಗೆ ರಾಷ್ಟ್ರಪತಿ ಕೋವಿಂದ್ ಶ್ಲಾಘನೆ

05:22 PM Apr 21, 2020 | Hari Prasad |

ನವದೆಹಲಿ: ಕೋವಿಡ್ ವಿರುದ್ಧ ಹೋರಾಡುತ್ತಿರುವ ಪೊಲೀಸ್‌ ಸಿಬಂದಿ, ಆರೋಗ್ಯ ಕಾರ್ಯಕರ್ತರು, ಸೈನಿಕರಿಗೆ ಸರಣಿ ಟ್ವೀಟ್‌ ಮೂಲಕ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

‘ಬನ್ನಿ ನಮಗಾಗಿ ದೇಶದ ಜನರಿಗಾಗಿ, ಕೋವಿಡ್ ವೈರಸ್ ಹೊಡೆದೋಡಿಸಲು ಹಗಲಿರುಳೆನ್ನದೆ ಶ್ರಮವಹಿಸುತ್ತಿರುವ ಪೊಲೀಸ್‌ ಸಿಬಂದಿ, ಸೈನಿಕರು ಹಾಗೂ ಆರೋಗ್ಯ ಸಿಬಂದಿ ಸಾಹಸಕ್ಕೆ ಕೃತಜ್ಞತೆ ಸಲ್ಲಿಸೋಣ, ದಿಗ್ಬಂಧನದ ಸಮಯದಲ್ಲಿ ಪೊಲೀಸರ ಸಂವೇದನಾಶೀಲತೆ, ಕರ್ತವ್ಯನಿಷ್ಠೆಯ ಪರಿಚಯವಾಗುತ್ತಿದೆ, ಮತ್ತೂಂದು ಕಡೆ ನಮ್ಮ ಸೈನಿಕರು ಗಡಿಯಲ್ಲೂ ಭಯೋತ್ಪಾದನೆಯ ವಿರುದ್ಧವೂ ಹೋರಾಟ ನಡೆಸುತ್ತಿದ್ದಾರೆ, ಅವರೆಲ್ಲರ ಶ್ರಮವನ್ನು ಶ್ಲಾಘಿಸಬೇಕಿದೆ’ ಎಂದು ಟ್ವಿಟ್‌ ಮಾಡಿದ್ದಾರೆ.

ಆರೋಗ್ಯ ಕಾರ್ಯಕರ್ತರು, ಪೊಲೀಸರ ಮೇಲೆ ದೇಶದಲ್ಲಿ ದಾಳಿ ಹೆಚ್ಚುತ್ತಿರುವ ಬೆನ್ನಲ್ಲೇ ರಾಷ್ಟ್ರಪತಿಯವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next