Advertisement

ದೂರದರ್ಶನ ಚಂದನ ಪ್ರಶಸ್ತಿ ಪ್ರದಾನ ಇಂದು

12:43 PM Nov 17, 2018 | Team Udayavani |

ಬೆಂಗಳೂರು: ದೂರದರ್ಶನ ಚಂದನದ 2018ನೇ ಸಾಲಿನ ಪ್ರಶಸ್ತಿ ಪ್ರಕಟವಾಗಿದೆ. ಸಂಗೀತ ಕ್ಷೇತ್ರದಿಂದ ಪಂ ಎಂ.ವೆಂಕಟೇಶಕುಮಾರ್‌, ನೃತ್ಯ ಕ್ಷೇತ್ರದಿಂದ ನಂದಿನಿ ಈಶ್ವರ್‌, ಕೃಷಿ ಕ್ಷೇತ್ರದಿಂದ ಮ್ಯಾಥ್ಯೂಸ್‌, ನಾಟಕ ಕ್ಷೇತ್ರದಿಂದ ಸಿ.ಎಂ.ನರಸಿಂಹಮೂರ್ತಿ, ಸಾಹಿತ್ಯ ಕ್ಷೇತ್ರದಿಂದ ಸಾರಾ ಅಬೂಬಕರ್‌, ಸಿನಿಮಾ ಕ್ಷೇತ್ರದಿಂದ ಸುರೇಶ್‌ ಅರಸು,

Advertisement

ಕ್ರೀಡಾ ಕ್ಷೇತ್ರದಿಂದ ಅಭಿನಯ ಎಸ್‌. ಶೆಟ್ಟಿ, ಲಲಿತಕಲಾ ಕಲಾಕ್ಷೇತ್ರದಿಂದ ನಾಡೋಜ ಜೆ.ಎಸ್‌.ಖಂಡೇರಾವ್‌ ಮತ್ತು ಆರೋಗ್ಯ ಕ್ಷೇತ್ರದಿಂದ ಡಾ.ಸಿ.ಎನ್‌.ಮಂಜುನಾಥ ಅವರಿಗೆ ದೂರದರ್ಶನ ಚಂದನ ಪ್ರಶಸ್ತಿ ಲಭಿಸಿದೆ. ಶಿಕ್ಷಣ ಕ್ಷೇತ್ರದಿಂದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಪ್ರಶಸ್ತಿಗೆ ಆಯ್ಕೆಯಾಗಿದೆ.

ನ.17ರಂದು ಸಂಜೆ 5.30ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ದೂರದರ್ಶನ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಸಾರ ಭಾರತಿ ಮಂಡಳಿಯ ಹಣಕಾಸು ವಿಭಾಗದ ಸದಸ್ಯ ರಾಜೀವ್‌ ಸಿಂಗ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next