Advertisement

BSY ಸಹಿತ ಹಿರಿಯ ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸಕ್ಕೆ ಸಿದ್ಧತೆ

11:12 PM Sep 09, 2023 | Pranav MS |

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ರಣಕಹಳೆ ಮೂಡಿಸಲು ರಾಜ್ಯ ಪ್ರವಾಸ ಹೊರಟಿರುವ ಬಿ.ಎಸ್‌. ಯಡಿಯೂರಪ್ಪ ಜತೆಗೆ ಇನ್ನೂ ಕೆಲವು ಹಿರಿಯ ನಾಯಕರನ್ನು ಸೇರಿಸಲು ಬಿಜೆಪಿ ತೀರ್ಮಾನಿಸಿದೆ.

Advertisement

ಈ ಸಂಬಂಧ ಸೆ. 12ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಯಾರ್ಯಾರು ಎಲ್ಲಿಂದ ಪ್ರವಾಸ ನಡೆಸ ಬೇಕೆಂದು ಚರ್ಚಿಸಲಾಗುವುದು.
ಸೆ.16ರಿಂದ ಕುರುಡುಮಲೆಯಿಂದ ಪ್ರವಾಸ ಪ್ರಾರಂಭಿಸುವುದಾಗಿ ಬಿಎಸ್‌ವೈ ಘೋಷಿಸಿದ್ದು, ಇದು ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಜತೆಗೆ ಹಳೆ ಮೈಸೂರು ಭಾಗದಿಂದ ಆರ್‌.ಅಶೋಕ, ಮಧ್ಯ ಕರ್ನಾಟಕದಿಂದ ಬಸವರಾಜ ಬೊಮ್ಮಾಯಿ, ಕಿತ್ತೂರು ಕರ್ನಾಟಕ ಭಾಗದಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರವಾಸ ನಡೆಸುವ ಸಾಧ್ಯತೆ ಇದೆ. ಜತೆಗೆ ನಳಿನ್‌ ಕುಮಾರ್‌ ವೇಳಾ ಪಟ್ಟಿಯೂ ನಿಗದಿಯಾಗಿದೆ. ಹೀಗಾಗಿ ಹೊಸ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ.

ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದೂ ಹೇಳಿಲ್ಲ. ಇವೆಲ್ಲ ಮಾಧ್ಯಮಗಳ ಸೃಷ್ಟಿ . ಲೋಕಸಭಾ ಚುನಾವಣೆಗೆ ನಿಲ್ಲುವ ಪ್ರಶ್ನೆಯೇ ಇಲ್ಲ. ಪಕ್ಷ ಸಂಘಟನೆ ನನ್ನ ಗುರಿ. -ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next