Advertisement

ವಾರ್ಡ್‌ ಅಭಿವೃದ್ಧಿಗೆ ಆದ್ಯತೆ ನೀಡಿ

03:06 PM Sep 15, 2018 | Team Udayavani |

ಯಾದಗಿರಿ: ನೂತನವಾಗಿ ಆಯ್ಕೆಯಾದ ನಗರಸಭೆ ಸದಸ್ಯರು ತಮ್ಮ ವಾರ್ಡ್‌ ಅಭಿವೃದ್ಧಿ ಪಡಿಸುವುದರೊಂದಿಗೆ
ನಗರವನ್ನು ಮತ್ತು ವಾರ್ಡ್‌ನ್ನು ಮಾದರಿಯಾಗಿಸಬೇಕೆಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು. ಇಲ್ಲಿನ ಶರಣ ನಗರದ ಶಹಾಪೂರ ಪೇಟೆಯ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ರುದ್ರಾಭಿಷೇಕ, ವಾರ್ಡ್‌ ನಂ. 3ರ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

Advertisement

ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುವುದು ಎಂದರೆ ಸುಲಭದ ಮಾತಲ್ಲ. ಎಲ್ಲರನ್ನು ವಿಶ್ವಾಕ್ಕೆ ತೆಗೆದುಕೊಂಡು ಎಲ್ಲಾ
ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕಿವಿಮಾತು ಹೇಳಿದರು. ಸನ್ಮಾನ ಸ್ವೀಕರಿಸಿದ ವಿಲಾಸ ಪಾಟೀಲ ಮಾತನಾಡಿ, ವಾರ್ಡ್‌ನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲು ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವೆ ಎಂದು ತಿಳಿಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಜಯ ಪಾಟೀಲ ಮಾತನಾಡಿದರು. ಸಿದ್ಧಲಿಂಗೇಶ್ವರ
ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ದೊಡ್ಡಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. 

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರು, ಮುಖಂಡರಾದ ಅಯ್ಯಣ್ಣ ಹುಂಡೇಕಾರ್‌, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಸುಭಾಷ ಆಯಾರಕರ್‌, ಚಂದ್ರಶೇಖರ ಅರಳಿ, ಸಿದ್ದಣ್ಣ ಬಾಡದ, ಚನ್ನಬಸಪ್ಪ ಹುಂಡೇಕಲ್‌, ಸಣ್ಣ ಮುನಿಯಪ್ಪ ಬಾವಿಕಟ್ಟಿ, ಸೋಮನಾಥ ಜೈನ್‌, ರವಿ ಕಂದಕೂರು ಇದ್ದರು. ಸಂದೀಪ ಮಹೇಂದ್ರಕರ್‌, ಅಂಬರೇಷ ತಡಿಬಿಡಿ, ಸುಭಾಷ ದೇವದುರ್ಗ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next