Advertisement

ಉತ್ತಮ ಇಳುವರಿಗಾಗಿ ಪ್ರಾರ್ಥನೆ

05:32 PM Jan 03, 2022 | Team Udayavani |

ಸುರಪುರ: ಎಳ್ಳ ಅಮಾವಾಸ್ಯೆ ನಿಮಿತ್ತ ತಾಲೂಕಿನ ಹೆಮನೂರ, ಹಾಲಗೇರಾ, ಶಖಾಪುರ, ರತ್ತಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಚರಗ ಚೆಲ್ಲಿ ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಹೊಲದಲ್ಲಿ ಬೆಳೆದ ಜೋಳ ದಂಟಿಗೆ ದಂಡೆ ಬಾಸಿಂಗ ಕಟ್ಟಿದರು. ಐದು ಕಲ್ಲುಗಳನಿಟ್ಟು ಪಾಂಡವರನ್ನಗಿ ಮಾಡಿದರು. ನದಿಯಿಂದ ತಂದಿದ್ದ ಜಲತೀರ್ಥ ಸಿಂಪಡಿಸಿ ಕುಂಕುಮ, ವಿಭೂತಿ ಹಚ್ಚಿ ನೈವೇದ್ಯ ಸಮರ್ಪಿಸಿದರು. ಕಾಯಿ ಒಡೆದು ಕರ್ಪೂರ ಬೆಳಗಿದರು. ನಂತರ ವಿಶೇಷ ಖ್ಯಾದ್ಯವನ್ನು ಹೊಲದ ನಾಲ್ಕು ದಿಕ್ಕುಗಳಲ್ಲಿ ಚೆಲ್ಲಿದರು. ಉತ್ತಮ ಇಳುವರಿಗಾಗಿ ಪ್ರಾರ್ಥಿಸಿದರು.

ಹತ್ತಿರದ ದೇವಸ್ಥಾನಗಳಿಗೆ ತೆರಳಿ ಕಾಯಿ ಹೊಡೆದು ಉತ್ತಮ ಇಳುವರಿ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ನಂತರ ಕುಟುಂಬದ ಬಂಧುಬಾಂಧವರು, ಗೆಳೆಯರು ಸೇರಿ ಭೋಜನ ಸವಿದರು.

Advertisement

Udayavani is now on Telegram. Click here to join our channel and stay updated with the latest news.

Next