Advertisement

ಅಭಿಷೇಕ್‌ ಚಿತ್ರಕ್ಕೆ ಪ್ರಶಾಂತ್‌ ರಾಜ್‌ ನಿರ್ದೇಶನ?

10:47 AM Sep 17, 2019 | Lakshmi GovindaRaju |

ಅಭಿಷೇಕ್‌ ಅಂಬರೀಶ್‌ “ಅಮರ್‌’ ಚಿತ್ರದ ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗಲೂ ಅದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಅಭಿಷೇಕ್‌ ಅಂಬರೀಶ್‌, “ಅಮರ್‌’ ಚಿತ್ರದ ಬಳಿಕ ಸಾಕಷ್ಟು ಕಥೆ ಕೇಳಿರುವುದುಂಟು. ಆ ಪೈಕಿ ಎರಡು ಕಥೆಗಳನ್ನು ಒಪ್ಪಿದ್ದು, ಆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಜೋರಾಗಿತ್ತು. ಹಾಗಾದರೆ, ಆ ಎರಡು ಕಥೆಗಳು ಯಾರು ಹೇಳಿದ್ದು? ಅಭಿಷೇಕ್‌ ಅಂಬರೀಶ್‌ ಅವರ ಎರಡನೇ ಚಿತ್ರವನ್ನು ನಿರ್ದೇಶನ ಮಾಡುವ ನಿರ್ದೇಶಕ ಯಾರು? ಈ ಪ್ರಶ್ನೆ ಸದ್ಯಕ್ಕೆ ಗಿರಕಿ ಹೊಡೆಯುತ್ತಿದೆ.

Advertisement

ಈಗ ಕೇಳಿಬರುತ್ತಿರುವ ಸುದ್ದಿಯೆಂದರೆ, ಅಭಿಷೇಕ್‌ ಅಂಬರೀಶ್‌ ಅವರಿಗೆ “ಜೂಮ್‌’ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ರಾಜ್‌ ಅವರು ಕಥೆಯೊಂದನ್ನು ಹೇಳಿದ್ದು, ಆ ಕಥೆಯ ಒನ್‌ಲೈನ್‌ ಇಷ್ಟವಾಗಿದ್ದು, ಆ ಐಡಿಯಾ ಮೇಲೆ ವರ್ಕ್‌ ನಡೆಸಿ ಎಂಬ ಗ್ರೀನ್‌ಸಿಗ್ನಲ್‌ ಕೂಡ ಅಭಿಷೇಕ್‌ ಅವರಿಂದ ಸಿಕ್ಕಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಅಭಿಷೇಕ್‌ ಅಂಬರೀಶ್‌ ಅವರ ಎರಡನೇ ಚಿತ್ರಕ್ಕೆ ಪ್ರಶಾಂತ್‌ ರಾಜ್‌ ನಿರ್ದೇಶಕರಾಗಲಿದ್ದಾರೆ.

ಈ ಕುರಿತು ಸ್ವತಃ “ಉದಯವಾಣಿ’ಗೆ ಸ್ಪಷ್ಟಪಡಿಸಿದ ನಿರ್ದೇಶಕ ಪ್ರಶಾಂತ್‌ರಾಜ್‌, “ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಅಧಿಕೃತವಾಗಿ ಅನೌನ್ಸ್‌ ಮಾಡುವುದಷ್ಟೇ ಬಾಕಿ. ಒನ್‌ಲೈನ್‌ ಕೇಳಿದ ಅವರು, ಐಡಿಯಾ ಚೆನ್ನಾಗಿದೆ. ಇದನ್ನು ಮುಂದುವರೆಸಿ ಎಂದಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿದ್ದು, ಮಾಸ್‌ ಎಲಿಮೆಂಟ್ಸ್‌ ಇರಲಿದೆ. ಕಲರ್‌ಫ‌ುಲ್‌ ಸಿನಿಮಾ ಕೊಡುವ ಉದ್ದೇಶದಿಂದ ಹೊಸಬಗೆಯ ಕಥೆ ಮಾಡಿದ್ದೇನೆ. ತುಂಬಾ ಅದ್ಧೂರಿಯಾಗಿ, ಹೊಸತನದೊಂದಿಗೆ ಚಿತ್ರ ಮಾಡುವ ಯೋಚನೆ ಇದೆ.

ಇದು ನನ್ನ ಏಳನೇ ಚಿತ್ರ ಆಗಲಿದ್ದು, ಇಷ್ಟರಲ್ಲೇ ಇನ್ನಷ್ಟು ಮಾಹಿತಿ ನೀಡುತ್ತೇನೆ’ ಎಂಬುದು ಪ್ರಶಾಂತ್‌ರಾಜ್‌ ಅವರ ಮಾತು. ಅಂದಹಾಗೆ, ಅಭಿಷೇಕ್‌ ಅಂಬರೀಶ್‌ ಅವರು ಹೊಸ ಗೆಟಪ್‌ನಲಿದ್ದ ಫೋಟೋವೊಂದು ಇತ್ತೀಚೆಗೆ ಹರಿದಾಡಿತ್ತು. ಸಖತ್‌ ಸ್ಲಿಮ್‌ ಆಗಿ, ಗಡ್ಡ ಹಾಗು ಮೀಸೆಯೊಂದಿಗಿನ ಆ ಹೊಸ ಗೆಟಪ್‌ ಎರಡನೇ ಚಿತ್ರದ್ದು ಎಂದೇ ಹೇಳಲಾಗುತ್ತಿತ್ತು. ಆದರೆ, ಅದು ನಿಜವಾಗಿಯೂ ತಮ್ಮ ಎರಡನೇ ಚಿತ್ರಕ್ಕೆ ಮಾಡಿಕೊಂಡ ಗೆಟಪ್‌ ಇರಬಹುದಾ ಎಂಬ ಪ್ರಶ್ನೆ ಕೂಡ ಹಾಗೆಯೇ ಇದೆ. ಅದೇನೆ ಇರಲಿ, ಪ್ರಶಾಂತ್‌ ರಾಜ್‌ ಅವರ ಹಿಂದಿನ ಚಿತ್ರಗಳಲ್ಲಿ ಪಕ್ಕಾ ಮನರಂಜನೆ ಇತ್ತು.

ಆ ಸಿನಿಮಾಗಳಲ್ಲಿ ಯಶಸ್ಸು ಕಂಡಿದ್ದರು ಕೂಡ. ಈಗ ಅಭಿಷೇಕ್‌ ಅವರಿಗೆ ಹೇಳಿದ ಕಥೆಯಲ್ಲೂ ಮನರಂಜನೆ ಹೇರಳವಾಗಿದೆಯಂತೆ. ಆ ಸಿನಿಮಾ ಹೇಗಿರುತ್ತೆ ಎಂಬುದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು. ಇನ್ನು, ಅಂಬರೀಶ್‌ ಅವರ “ಅಂಬಿ ನಿಂಗ್‌ ವಯಸ್ಸಾಯೊ¤à’ ಚಿತ್ರ ನಿರ್ದೇಶಿಸಿದ್ದ ಗುರುದತ್‌ ಗಾಣಿಗ ಅವರು ಕೂಡ ಅಭಿಷೇಕ್‌ ಜೊತೆ ಒಂದು ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದಕ್ಕಿನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಆದರೆ, ಆ ಬಗ್ಗೆಯೂ ಈಗಾಗಲೇ ಮಾತುಕತೆ ನಡೆದಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next