Advertisement

Prashant Kishore; ನನ್ನನ್ನು ಟೀಕಿಸುವವರು ಜೂ.4ಕ್ಕೆ ಕೈಯಲ್ಲಿ ನೀರು ಹಿಡಿದು ಕೂರುತ್ತಾರೆ

12:50 AM May 24, 2024 | Team Udayavani |

ಹೊಸದಿಲ್ಲಿ: ಈ ಬಾರಿಯ ಲೋಕಸಭೆ ಚುನಾವಣೆ ಫ‌ಲಿತಾಂಶದ ಕುರಿತು ಭವಿಷ್ಯ ನುಡಿದ ನನ್ನನ್ನು ಟೀಕಿಸುತ್ತಿರುವವರು ಜೂ.4ರಂದು ಅಂದರೆ ಫ‌ಲಿತಾಂಶದ ದಿನ ಕೈಯ್ಯಲ್ಲಿ ನೀರನ್ನು ಹಿಡಿದುಕೊಂಡು ಕೂರಬೇಕಾಗುತ್ತದೆ. ಫ‌ಲಿತಾಂಶದ ಬಿಸಿ ಹಾಗಿ ರಲಿದೆ ಎಂದು ಪ್ರಶಾಂತ್‌ ಕಿಶೋರ್‌ ಟ್ವೀಟ್‌ ಮಾಡಿದ್ದಾರೆ. ಪತ್ರಕರ್ತ ಕರಣ್‌ ತಾಪರ್‌ ಜತೆಗಿನ ಸಂದರ್ಶನದಲ್ಲಿ, ಊಹೆಗಳು ಸುಳ್ಳಾಗಿದ್ದನ್ನು ಪ್ರಸ್ತಾವಿಸಿದ್ದರು. ಅದೇ ಸಮಯಕ್ಕೆ ಪ್ರಶಾಂತ್‌ ನೀರು ಕುಡಿದಿದ್ದರು. ಈ ವೀಡಿಯೋ ವೈರಲ್‌ ಆಗಿತ್ತು. ಪತ್ರಕರ್ತ ಕರಣ್‌ ಪ್ರಶಾಂತ್‌ಗೆ ನೀರಿಳಿಸಿದ್ದಾರೆ ಎನ್ನುವಂತೆ ಕೆಲವರು ಬಿಂಬಿಸಿದ್ದರು. ಇದದಕ್ಕೆ ಪ್ರಶಾಂತ್‌ ತಿರುಗೇಟು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next