Advertisement

ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ ಸೇರ್ಪಡೆ ಫೈನಲ್‌

01:02 AM Apr 23, 2022 | Team Udayavani |

ಹೊಸದಿಲ್ಲಿ: ಚುನಾವಣ ವ್ಯೂಹ ರಚನೆಕಾರ ಪ್ರಶಾಂತ್‌ಕಿಶೋರ್‌ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಖಚಿತ­ವಾಗಿದೆ.

Advertisement

ಪಕ್ಷದಲ್ಲಿ ಅವರು ಪ್ರಧಾನ ಭೂಮಿಕೆ­ಯನ್ನೇ ನಿಭಾಯಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಅದ­ಕ್ಕೊಂದು ನಿಯಮವೂ ಅಡ್ಡಿಯಾಗುವ ಸಾಧ್ಯತೆ ಇದೆ.

ಮುಂದಿನ ಲೋಕಸಭೆ ಚುನಾವಣೆ­ಯಲ್ಲಿ ಕಾಂಗ್ರೆಸ್‌ ಗೆಲ್ಲಲು ಕಿಶೋರ್‌ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಅಧ್ಯ­ಯನ ಮಾಡಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಿಸಿರುವ ಸಮಿತಿ, “ಕಾಂಗ್ರೆಸ್‌ಗೆ ಸೇರ್ಪಡೆ­ಗೊಂಡ ಬಳಿಕ ಪ್ರಶಾಂತ್‌ ಕಿಶೋರ್‌ ಇತರ ಎಲ್ಲ ರಾಜಕೀಯ ಪಕ್ಷಗಳಿಗೆ ರಣ­ತಂತ್ರ ರಚನೆ ಮಾಡಿ­ಕೊಡುವುದನ್ನು ನಿಲ್ಲಿಸಬೇಕು’ ಎಂದು ಪ್ರತಿಪಾದಿ­ಸಿದೆ.

ಪ್ರಶಾಂತ್‌ ಕಿಶೋರ್‌ ಟಿಎಂಸಿ, ವೈಎಸ್‌ಆರ್‌ ಕಾಂಗ್ರೆಸ್‌, ಡಿಎಂಕೆ ಜತೆಗೆ ಕೆಲಸ ಮಾಡಿದ್ದರು.
ಅಗತ್ಯವಿಲ್ಲ: ಈ ನಡುವೆ, ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್‌, “ಕಾಂಗ್ರೆಸ್‌ಗೆ ಪ್ರಶಾಂತ್‌ ಬಂದರೂ, ಮಧ್ಯಪ್ರದೇಶದಲ್ಲಿ ಅವರ ಅಗತ್ಯ ಬೀಳಲಾರದು’ ಎಂದು ಹೇಳಿದ್ದಾರೆ.

ಪ್ರಶಾಂತ್‌ ಕಾಂಗ್ರೆಸ್‌ಗೆ ಬಂದರೆ ಕಮಲ್‌ನಾಥ್‌ಗೆ ವಿಶ್ರಾಂತಿ ನೀಡಬಹುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ಲೇವಡಿ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next