Advertisement

APM ಬಸ್‌ಗಳ ಮಾಲೀಕ ಪ್ರಸನ್ನ ಬಲ್ಲಾಳ್‌ ನಿಧನ 

09:51 AM Sep 23, 2017 | |

ಹೆಬ್ರಿ : ಉಡುಪಿಯ ಪ್ರಸಿದ್ಧ ಅನಂತ ಪದ್ಮನಾಭ ಸಾರಿಗೆ ಸಂಸ್ಥೆಯ ಮಾಲೀಕ, ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ , ಕಾಂಗ್ರೆಸ್‌ ಹಿರಿಯ ನಾಯಕ ಎಚ್‌. ಪ್ರಸನ್ನ ಬಲ್ಲಾಳ್‌ ಅವರು ಶನಿವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. 

Advertisement

ಬಂಟ ಸಮುದಾಯದ ಮುಖಂಡರಾಗಿದ್ದ ಬಲ್ಲಾಳರು ನೂರಾರು ಬಸ್‌ಗಳ ಮಾಲೀಕರಾಗಿದ್ದು, ಸಮಾಜ ಸೇವೆ ಮತ್ತು ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. 

ಪತ್ನಿ ಮತ್ತು ಪುತ್ರನನ್ನು ಬಲ್ಲಾಳ್‌ ಅಗಲಿದ್ದು, ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. 

ಮೃತರ ಗೌರವಾರ್ಥವಾಗಿ ಎಪಿಎಂ ಸಂಸ್ಥೆಯ ಯಾವುದೇ ಬಸ್‌ಗಳು ಇಂದು ಸಂಚರಿಸುತ್ತಿಲ್ಲ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next