Advertisement

ಪರಪ್ಪನ ಕಾರಾಗೃಹಕ್ಕೆ ಮರಳಿದ ವಿ.ಶಶಿಕಲಾ

07:00 AM Oct 13, 2017 | Team Udayavani |

ಬೆಂಗಳೂರು: ಐದು ದಿನಗಳ ಕಾಲ ಪೆರೋಲ್‌ ಆಧಾರದ ಮೇಲೆ ಚೆನ್ನೈಗೆ ತೆರಳಿದ್ದ ಎಐಡಿಎಂಕೆ ಮುಖಂಡೆ ವಿ.ಶಶಿಕಲಾ ಗುರುವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವಾಪಸ್‌ ಬಂದಿದ್ದಾರೆ.

Advertisement

ಗುರುವಾರ ಮಧ್ಯಾಹ್ನ ಚೆನ್ನೈನಿಂದ ಬೆಂಬಲಿಗರು ಹಾಗೂ ಎಐಡಿಎಂಕೆ ಮುಖಂಡ ದಿನಕರನ್‌ ಜತೆ ಬೆಂಗಳೂರಿಗೆ ಹೊರಟಿದ್ದ
ಶಶಿಕಲಾ, ಸಂಜೆ 4 30ರ ಸುಮಾರಿಗೆ ಕೇಂದ್ರ ಕಾರಾಗೃಹದ ಬಳಿ ಆಗಮಿಸಿದರು. ಜೈಲಿನ ಬಳಿ ಬೆಂಬಲಿಗರು ಹಾಗೂ ದಿನಕರನ್‌, ಜೈಲಿನಲ್ಲಿರುವ ದೋಷಿ ಸುಧಾಕರನ್‌ ಪುತ್ರ ಜಯಾನಂದ್‌ಗೆ ಧನ್ಯವಾದ ತಿಳಿಸಿ ಜೈಲಿನೊಳಕ್ಕೆ ಪ್ರವೇಶಿಸಿದರು. ಐದು ದಿನಗಳ ಪೆರೋಲ್‌ ಮುಕ್ತಾಯವಾದ ಹಿನ್ನೆಲೆಯಲ್ಲಿ ವಾಪಸ್‌ ಆಗಮಿಸಿದ ಶಶಿಕಲಾರನ್ನು ಜೈಲು ನಿಯಮಾವಳಿಗಳಂತೆ ತಪಾಸಣೆ ನಡೆಸಿದ ಅಧಿಕಾರಿಗಳು ಅವರು ತಂಗಿದ್ದ ಜೈಲು ಕೊಠಡಿಗೆ ಕಳುಹಿಸಿದರು. ಐದು ದಿನಗಳ ಕಾಲ ಚೆನ್ನೈನಲ್ಲಿದ್ದ ಶಶಿಕಲಾ ಪೆರೋಲ್‌ ಷರತ್ತುಗಳನ್ನು ಉಲ್ಲಂ ಸಿಲ್ಲ ಎಂಬುದಾಗಿ ತಿಳಿದು ಬಂದಿದೆ. 

ಅಕ್ರಮ ಆದಾಯ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಕಳೆದ 8 ತಿಂಗಳಿಂದ ಜೈಲಿನಲ್ಲಿರುವ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪೆ¤ ವಿ.ಶಶಿಕಲಾ, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಪತಿ ಎಂ .ನಟರಾಜನ್‌ ಅವರನ್ನು ಭೇಟಿ ಮಾಡುವ ಸಲುವಾಗಿ ಜೈಲು ಅಧಿಕಾರಿಗಳು ಅ.7ರಿಂದ 11ರವರೆಗೆ ಷರತ್ತು ಬದ್ಧ ಪೆರೋಲ್‌ ಮಂಜೂರು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next