Advertisement

ಶ್ರೀಕಾಂತ್‌ಗೆ ಆಘಾತ; ಪ್ರಣಯ್‌ಗೆ ಪ್ರಶಸ್ತಿ

07:20 AM Nov 09, 2017 | Team Udayavani |

ನಾಗ್ಪುರ: ವಿಶ್ವದ ಎರಡನೇ ರ್‍ಯಾಂಕಿನ ಕಿದಂಬಿ ಶ್ರೀಕಾಂತ್‌ ಅವರನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಸೋಲಿಸಿದ ಎಚ್‌ಎಸ್‌ ಪ್ರಣಯ್‌ ಅವರು ರಾಷ್ಟ್ರೀಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Advertisement

ಈ ವರ್ಷ ನಾಲ್ಕು ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದ ಶ್ರೀಕಾಂತ್‌ ಅವರನ್ನು 21-15, 16-21, 21-7 ಗೇಮ್‌ಗಳಿಂದ ಆಘಾತಗೊಳಿಸಿದ ವಿಶ್ವದ 11ನೇ ರ್‍ಯಾಂಕಿನ ಪ್ರಣಯ್‌ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು.

ಮೊದಲ ಗೇಮ್‌ನಲ್ಲಿ 3-0 ಮುನ್ನಡೆ ಸಾಧಿಸುವ ಮೂಲಕ ಶ್ರೀಕಾಂತ್‌ ಉತ್ತಮ ಆರಂಭ ಪಡೆದಿದ್ದರು. ಆದರೆ ಆಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಿದ ಪ್ರಣಯ್‌ ತೀವ್ರ ಪೈಪೋಟಿಯಿಂದ ಹೋರಾಡಿ 7-7 ಸಮಬಲ ಸಾಧಿಸಿ ಮುನ್ನಡೆದರು. 

ಅಂತಿಮವಾಗಿ 21-15ರಿಂದ ಮೊದಲ ಗೇಮ್‌ ವಶಪಡಿಸಿಕೊಂಡರು. ದ್ವಿತೀಯ ಗೇಮ್‌ನಲ್ಲಿ ಶ್ರೀಕಾಂತ್‌ ವೀರೋಚಿತ ಆಟ ಆಡಿದರು. ಆದರೂ ಪ್ರಣಯ್‌ 13-13 ಅಂಕಗಳ ತನಕ ಸಮಬಲದ ಹೋರಾಟ ನೀಡಿದ್ದರು. ನಿರ್ಣಾಯಕ ತೃತೀಯ ಗೇಮ್‌ನಲ್ಲಿ ಮತ್ತೆ ಮೇಲುಗೈ ಸಾಧಿಸಿದ ಪ್ರಣಯ್‌ ಸುಲಭವಾಗಿ ಗೆದ್ದು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next