Advertisement

ರಾಷ್ಟ್ರೀಯ ಯೂತ್ ಪಾರ್ಲಿಮೆಂಟಿಗೆ ಶಿರಸಿಯ ಪ್ರಣವ್ ಭಾರದ್ವಾಜ್ ಆಯ್ಕೆ

09:53 PM Apr 13, 2022 | Team Udayavani |

ಶಿರಸಿ: ಮಾನವ ರಚನಾ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ನವದೆಹಲಿಯ ರ‍್ಯಾವರಣ ಸಂರಕ್ಷಣಾ ಗತಿವಿಧಿ ಸಂಸ್ಥೆಯು ಪಾರ್ಲಿಮೆಂಟ್ ಭವನದಲ್ಲಿ ನಡೆಸುವ ರಾಷ್ಟ್ರೀಯ ಯೂತ್ ಪಾರ್ಲಿಮೆಂಟಿಗೆ ಶಿರಸಿಯ ಪ್ರಣವ್ ಭಾರದ್ವಾಜ್ ಆಯ್ಕೆ ಆಗಿದ್ದಾರೆ.

Advertisement

ಏ.16 ರಂದು ರಾಷ್ಟ್ರೀಯ ಪರಿಸರ ಯುವ ಸಂಸತ್ – 2022 ಎಂಬ ಯೂತ್ ಪಾರ್ಲಿಮೆಂಟ್ ಸಂಘಟಿಸಿದ್ದು ಪ್ರಣವ್ ಭಾರದ್ವಾಜ್ ಕೂಡ ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಭಾರತದಿಂದ ಹತ್ತು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಒಟ್ಟೂ 150 ವಿದ್ಯಾರ್ಥಿಗಳು ಈ ಯುವ ಸಂಸತ್‌ನಲ್ಲಿ ಪಾಲ್ಗೊಂಡು ವಿಷಯ ಮಂಡಿಸಿ ಚರ್ಚೆ ಮಾಡಲಿದ್ದಾರೆ.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ಕೇಂದ್ರ ಸರಕಾರದ ಪರಿಸರ ಅರಣ್ಯ ಮಂತ್ರಿ ಭೂಪೇಂದ್ರ ಯಾದವ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದೂರದರ್ಶನ ಸಂಸತ್ ವಾಹಿನಿಯಲ್ಲಿ ಇದರ ನೇರಪ್ರಸಾರವಾಗಲಿದೆ.

ಪ್ರಣವ್ ಭಾರದ್ವಾಜ್ ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದು, ಜ್ಯೋತಿ ಭಟ್ ಹಾಗೂ ಹಿರಿಯ ಸಹಾಯಕ ಇಂಜನೀಯರ್ ವಿ.ಎಂ.ಭಟ್ಟ ಮಗ ಎಂಬುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next