Advertisement

ದೇಶದ ಮಹಾನ್‌ ಪುತ್ರ ಹೆಡಗೇವಾರ್‌ ಗೌರವಾರ್ಪಣೆಗೆ ಬಂದಿದ್ದೇನೆ: ಪ್ರಣಬ್

07:08 PM Jun 07, 2018 | udayavani editorial |

ನಾಗ್ಪುರ : ಕಾಂಗ್ರೆಸ್‌ ಪಕ್ಷ ಸಹಿತ ದೇಶದ ವಿವಿಧ ಕಡೆಗಳಿಂದ ವ್ಯಕ್ತವಾದ ತೀವ್ರ ವಿರೋಧವನ್ನು ಲೆಕ್ಕಿಸದೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಂದು ಇಲ್ಲಿ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡರು. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಪ್ರಣಬ್‌ ಮುಖರ್ಜಿ ಅವರನ್ನು ಆದರದಿಂದ ಬರಮಾಡಿಕೊಂಡರು. 

Advertisement

ಪುತ್ರಿ ಶರ್ಮಿಷ್ಠಾ ಮುಖರ್ಜಿ, ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಮೊದಲಾದವರ ತೀವ್ರ ವಿರೋಧದ ನಡುವೆಯೂ ಪ್ರಣಬ್‌ ಮುಖರ್ಜಿ ಅವರಿಂದು ಇಲ್ಲಿನ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯಾಲಯಕ್ಕೆ ಆಗಮಿಸಿದರು. 

ಆರ್‌ಎಸ್‌ಎಸ್‌ ಸ್ಥಾಪಕ ಕೆ ಬಿ ಹಡಗೇವಾರ್‌ ಅವರ ಜನ್ಮಸ್ಥಳವಾಗಿರುವ ನಾಗ್ಪುರಕ್ಕೆ ಬಂದೊಡನೆಯೇ ಪ್ರಣಬ್‌ ಮುಖರ್ಜಿ ಅವರು “ನಾನಿಂದು ಭಾರತ ಮಾತೆಯ ಮಹಾನ್‌ ಪುತ್ರನಿಗೆ ಶ್ರದ್ಧಾಂಜಲಿ ಮತ್ತು ಗೌರವಾರ್ಪಣೆ ಮಾಡಲು ಇಲ್ಲಿಗೆ ಬಂದಿದ್ದೇನೆ’ ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯಾದಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಬರೆದರು. 

ಪ್ರಣಬ್‌ ಮುಖರ್ಜಿ ಅವರು ತಮ್ಮ ಭಾಷಣದಲ್ಲಿ ದೇಶ, ರಾಷ್ಟ್ರೀಯತೆ, ರಾಷ್ಟ್ರ ಪ್ರೇಮ ಮುಂತಾದ ವಿಷಯಗಳಿಗೆ ಒತ್ತು ನೀಡುವರೆಂದು ಮಾಧ್ಯಮ ಮೂಲಗಳು ಹೇಳಿವೆ. ಮೂಲಗಳ ಪ್ರಕಾರ ಪ್ರಣಬ್‌ ಅವರು ಆರ್‌ಎಸ್‌ಎಸ್‌ಗೆ ಯಾವುದೇ ಸಲಹೆ ನೀಡುವುದಿಲ್ಲ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next